‘ಆಗುವುದಿಲ್ಲ ಎಂದು ಅವರಿಗೆ ಹೇಳಿದ್ದೆ. ಇರುವುದು ಎರಡೇ ಜಾತಿ. ಒಂದು ಹೆಣ್ಣು, ಇನ್ನೊಂದು ಗಂಡು. ಧರ್ಮ ಒಂದೇ ಮಾನವ ಧರ್ಮ ಎನ್ನುವ ಸಂಸ್ಕಾರವನ್ನು ಮನೆಯಲ್ಲಿ ಕಲಿಸಿದ್ದಾರೆ. ನೀವು ಖಾವಿ ಧರಿಸಿ ಧರ್ಮ ಒಡೆಯುವ ಕೆಲಸ ಮಾಡಬೇಡಿ. ಧರ್ಮಪೀಠದಲ್ಲಿರುವವರು ಸಮಾಜ ಸುಧಾರಿಸಬೇಕು. ರಾಜಕಾರಣ ಮಾಡುವುದಿದ್ದರೆ ಖಾವಿ ತೆಗೆಯಿರಿ; ರಾಜಕಾರಣ ಮಾಡಬೇಡಿ ಎಂದು ಬುದ್ಧಿ ಹೇಳಿದೆ. ಎಷ್ಟು ಸಾಧ್ಯವೋ ಅಷ್ಟು ಒತ್ತಡ ಹಾಕಿಸುತ್ತಿದ್ದಾರೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ದೂರಿದ್ದರು.