ಚಿಕ್ಕೋಡಿ: ತಾಲ್ಲೂಕಿನ ಹತ್ತರವಾಟ ಗ್ರಾಮದಲ್ಲಿ ಭಾನುವಾರ ಸ್ನೇಹಿತರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅವಸಾನ ಕಂಡಿದೆ.
ಹುಕ್ಕೇರಿ ತಾಲ್ಲೂಕಿನ ಕೆಸರೂರ ಗ್ರಾಮದ ನಿಂಗಪ್ಪ ಬುಳ್ಳಾರ (25) ಕೊಲೆಯಾದವರು. ರುಸ್ತುಂಪೂರ ಗ್ರಾಮದ ಯಲ್ಲಪ್ಪ ಹಾಗೂ ಮಹೇಶ ಆರೋಪಿಗಳು. ಮದ್ಯ ಕುಡಿದ ಮತ್ತಿನಲ್ಲಿ ಮೂವರೂ ಗೆಳೆಯರ ಮಧ್ಯೆ ಜಗಳ ಆರಂಭವಾಗಿದೆ. ಆಗ ಉಳಿದಿಬ್ಬರು ನಿಂಗಪ್ಪ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡ ಕಾಮಗಾರಿಯೊಂದರ ನಿರ್ಮಾಣಕ್ಕಾಗಿ ಆಗಮಿಸಿದ್ದ ಮೂವರು ಮದ್ಯ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದು, ಚಿಕ್ಕೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.