ಬೆಳಗಾವಿ: ನಗರದ ಉದ್ಯಮಭಾಗದಲ್ಲಿ ಗುರುವಾರ ವ್ರಕ್ತಿಯೋಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ತಾಲ್ಲೂಕಿನ ಮಜಗಾವಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ನಿವಾಸಿ ಯಲ್ಲೇಶ ಶಿವಾಜಿ ಕೊಲ್ಕರ್ (27) ಕೊಲೆಯಾದವರು.
ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ ಘಟನೆ ನಡೆದಿದೆ. ನಡುರಸ್ತೆಯಲ್ಲಿಯೇ ಯಲ್ಲೇಶ ಅವರನ್ನು ಅಟ್ಟಾಡಿಸಿ ಕೊಚ್ಚಲಾಗಿದೆ. ಅವರ ತಲೆ, ಕತ್ತು, ಬೆನ್ನು, ತೊಡೆಗಳ ಮೇಲೆ ಮಾರಕಾಸ್ತ್ರಗಳ ಬಲವಾದ ಏಟು ಬಿದ್ದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಸುಳಿವು ಸಿಕ್ಕಿಲ್ಲ. ಉದ್ಯಮಭಾಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.