‘ಸರ್ಕಾರ ಕೆಡವಲು ಬಿಜೆಪಿ ಏನೂ ಮಾಡಬೇಕಿಲ್ಲ. ಅವರ ಪಕ್ಷದವರೇ ತುದಿಗಾಲಲ್ಲಿ ನಿಂತಿದ್ದಾರೆ. ಐದು ‘ಗ್ಯಾರಂಟಿ’ಗಳನ್ನು ಜಾರಿಗೆ ತಂದಾಗ ನಾವು ಸ್ವಾಗತಿಸಿದ್ದೆವು. ನಂತರದ ದಿನಗಳಲ್ಲಿ ಎಲ್ಲ ಯೋಜನೆಗಳಿಗೂ ಇನ್ನಿಲ್ಲದ ಷರತ್ತುಗಳನ್ನು ಹಾಕಿದ್ದಾರೆ. ಹೀಗಾಗಿ, ಜನರಿಗೂ ಇವು ಇಷ್ಟವಾಗಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.