‘ಸಮಗ್ರ ಕರ್ನಾಟಕದಲ್ಲಿ ಬಹಳಷ್ಟು ಜಾತಿ, ಉಪ ಜಾತಿಗಳಿವೆ. ತೀರಾ ಹಿಂದುಳಿದ ಸಮುದಾಯಗಳಿವೆ. ಹೀಗಾಗಿ ನೂರಾರು ನಿಗಮಗಳನ್ನು ಹುಟ್ಟು ಹಾಕಿ ₹ 50 ಕೋಟಿ ಅಥವಾ ₹ 100 ಕೋಟಿ ಒದಗಿಸಿದರೆ ಆ ಸಮುದಾಯಗಳು ಅಭಿವೃದ್ಧಿ ಹೊಂದಲಾರವು. ಆದ್ದರಿಂದ ಜಾತಿ, ಧರ್ಮ ಆಧರಿಸದೆ ಆದಾಯ ಆಧರಿಸಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಜಾತಿ ಮತ್ತು ಉಪ ಜಾತಿಗಳವರಿಗೆ ಮೀಸಲಾತಿ ಹಾಗೂ ಇತರ ಒಬಿಸಿ ಸೌಲಭ್ಯಗಳನ್ನು ನೀಡಿದರೆ ಯಾವುದೇ ಸಮಸ್ಯೆ ಆಗಲಾರದು’ ಎಂದಿದ್ದಾರೆ.