ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಭಾಷಿಕರ ಸಮೀಕ್ಷೆಗೆ ಆದೇಶ: ಮಹಾರಾಷ್ಟ್ರ ಸರ್ಕಾರದ ಕ್ರಮ ಖಂಡನೀಯ

Last Updated 19 ಫೆಬ್ರುವರಿ 2021, 16:28 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮಕನ್ನಡಿಗರೆ ಅಧಿಕಸಂಖ್ಯೆಯಲ್ಲಿರುವ ಮತ್ತು ಕನ್ನಡ ನಾಡು–ನುಡಿ ಬಗ್ಗೆಅಪಾರಅಭಿಮಾನ ಹೊಂದಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂದಕ್ಷಿಣಸೊಲ್ಲಾಪುರದಗಡಿಭಾಗದಲ್ಲಿಅನ್ಯಭಾಷಿಕರಸಮೀಕ್ಷೆನಡೆಸಲುಮಹಾರಾಷ್ಟ್ರಸರ್ಕಾರ ತನ್ನ ಗ್ರಾಮಪಂಚಾಯ್ತಿಗಳಿಗೆ ಆದೇಶನೀಡಿದೆ ಎನ್ನುವುದು ತುಂಬಾಅಸಂಗತ, ಅಪ್ರಸ್ತುತ ಮತ್ತು ಖಂಡನೀಯ’ ಎಂದು ಕರ್ನಾಟಕಗಡಿಪ್ರದೇಶಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ರಾಜ್ಯದಕನ್ನಡಿಗರೆಲ್ಲವಿರೋಧಿಸುತ್ತೇವೆ. ಅಲ್ಲಿನಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರಇಂತಹ ಸಮೀಕ್ಷೆಯಮೂಲಕ ಹೆದರಿಸುವಪ್ರಯತ್ನಮಾಡಬಾರದು' ಎಂದು ಹೇಳಿದ್ದಾರೆ.

‘ಸೌಹಾರ್ದ ಮತ್ತು ಸೌಜನ್ಯದಿಂದಇರುವ ಮಹಾರಾಷ್ಟ್ರದಲ್ಲಿನಕನ್ನಡಿಗರಿಗೆ ಅಲ್ಲಿನ ಸರ್ಕಾರವು ಗೌರವ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಭದ್ರತೆಯನ್ನು ನೀಡಬೇಕಾದುದು ಸಂವಿಧಾನಾತ್ಮಕವಾದ ಕರ್ತವ್ಯವಾಗಿದೆ. ಆದರೆ, ಅನಗತ್ಯವಾಗಿಆಗಾಗ ಗಡಿ ಭಾಗದಲ್ಲಿನಕನ್ನಡಿಗರಸ್ವಾಭಿಮಾನವನ್ನು ಕೆಣಕುವ ಕಾರ್ಯವನ್ನುಮಹಾರಾಷ್ಟ್ರಸರ್ಕಾರಮಾಡಬಾರದು’ ಎಂದು ಆಗ್ರಹಿಸಿದ್ದಾರೆ.

‘ಅಭಾಗದಗಡಿನಾಡಿನಕನ್ನಡಿಗರಜೊತೆ ರಾಜ್ಯ ಸರ್ಕಾರ ಸದಾ ಇರುತ್ತದೆ ಮತ್ತು ಸಮಸ್ಯೆಗಳ ನಿವಾರಣೆಗೆ ಸದಾ ಸ್ಪಂದಿಸುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT