<p><strong>ಚನ್ನಮ್ಮನ ಕಿತ್ತೂರು:</strong> ಸಮೀಪದ ಪರಸನಟ್ಟಿ ಪ್ರದೇಶದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ದಶಕಗಳಿಂದ ಉಳುಮೆ ಮಾಡುತ್ತ ಬಂದಿರುವ ಬಡ ರೈತರನ್ನು ಒಕ್ಕಲೆಬ್ಬಿಸಿದರೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಸೇರಿದ್ದ ಪ್ರಮುಖ ರೈತ ಮುಖಂಡರು ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದರು.</p>.<p>ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ. ಎಫ್. ಜಕಾತಿ ಮಾತನಾಡಿ, ‘ಪರಸನಟ್ಟಿ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರೇ ಹೆಚ್ಚು ಉಳುಮೆ ಮಾಡುತ್ತಿದ್ದಾರೆ. ಅವರೇನು ಹತ್ತಾರು ಎಕರೆ ಭೂಮಿ ಸಾಗುವಳಿ ಮಾಡುತ್ತಿಲ್ಲ. ಎರಡರಿಂದ ಸುಮಾರು 5 ಎಕರೆ ವರೆಗೆ 60 ವರ್ಷಗಳಿಂದ ಅವರ ಮನೆತನದವರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಅವರೇನು ಶ್ರೀಮಂತ ರೈತರಲ್ಲ’ ಎಂದು ಪ್ರತಿಪಾದಿಸಿದರು.</p>.<p>ಮುಖಂಡ ಅಪ್ಪೇಶ ದಳವಾಯಿ ಮಾತನಾಡಿ ‘ಚಿಕ್ಕ, ಚಿಕ್ಕ ರೈತರು ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಸೋಲಾರ ಪ್ಲಾಂಟ್ ನಿರ್ಮಿಸಲು ಗುತ್ತಿಗೆದಾರರ ಮೂಲಕ ಸರ್ಕಾರ ಹೊರಟಿದೆ. ಬೇರೆ ಜಮೀನಿನಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಯೋಚಿಸಬೇಕು. ರೈತರ ಬದುಕಿನ ಜತೆಗೆ ಚಲ್ಲಾಟ ಆಡಬಾರದು’ ಎಂದರು.</p>.<p>ಕಬ್ಬು ಬೆಳೆಗಾರರ ಸಂಘದ ಮುಖಂಡ ಪ್ರವೀಣ ಸರದಾರ ಮಾತನಾಡಿ, ‘ಬದುಕಿಗಾಗಿ ಸಾಗುವಳಿ ಮಾಢುತ್ತಿರುವ ರೈತರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯಬಾರದು. ಸಾಗುವಳಿ ಮಾಡಲು ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ನುಡಿದರು.</p>.<p>ನಾಗರತ್ನ ಪಾಟೀಲ ಮಾತನಾಡಿದರು. ಒಕ್ಕಲೆಬ್ಬಿಸದಂತೆ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಮುಖಂಡರಾದ ನಿಂಗಪ್ಪ ತಡಕೋಡ, ಪಕ್ಕೀರಪ್ಪ ಜಾಂಗಟಿ, ಬಸವರಾಜ ಕೆಳಗಡೆ, ಬಸವಣ್ಣೆಪ್ಪ ಚಲವಾದಿ, ವೆಂಕಟೇಶ ಹಂಚಿನಮನಿ, ಯಲ್ಲಪ್ಪ ಜಾಂಗಟಿ, ಅಣ್ಣಪ್ಪ ಗುಂಜಿ, ಭೀಮಣ್ಣ ಗರಗ, ಮಡಿವಾಳೆಪ್ಪ ಚಿನ್ನನ್ನವರ, ಅಬ್ದುಲ್ ರೆಹಮಾನ್ ಗಡಕರಿ, ಶಬ್ಬೀರಗೌಸ್ ಬೀಡಿ, ಸಂತರಾಮ ಭಾಸ್ಕರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು:</strong> ಸಮೀಪದ ಪರಸನಟ್ಟಿ ಪ್ರದೇಶದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ದಶಕಗಳಿಂದ ಉಳುಮೆ ಮಾಡುತ್ತ ಬಂದಿರುವ ಬಡ ರೈತರನ್ನು ಒಕ್ಕಲೆಬ್ಬಿಸಿದರೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಸೇರಿದ್ದ ಪ್ರಮುಖ ರೈತ ಮುಖಂಡರು ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದರು.</p>.<p>ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ. ಎಫ್. ಜಕಾತಿ ಮಾತನಾಡಿ, ‘ಪರಸನಟ್ಟಿ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರೇ ಹೆಚ್ಚು ಉಳುಮೆ ಮಾಡುತ್ತಿದ್ದಾರೆ. ಅವರೇನು ಹತ್ತಾರು ಎಕರೆ ಭೂಮಿ ಸಾಗುವಳಿ ಮಾಡುತ್ತಿಲ್ಲ. ಎರಡರಿಂದ ಸುಮಾರು 5 ಎಕರೆ ವರೆಗೆ 60 ವರ್ಷಗಳಿಂದ ಅವರ ಮನೆತನದವರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಅವರೇನು ಶ್ರೀಮಂತ ರೈತರಲ್ಲ’ ಎಂದು ಪ್ರತಿಪಾದಿಸಿದರು.</p>.<p>ಮುಖಂಡ ಅಪ್ಪೇಶ ದಳವಾಯಿ ಮಾತನಾಡಿ ‘ಚಿಕ್ಕ, ಚಿಕ್ಕ ರೈತರು ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಸೋಲಾರ ಪ್ಲಾಂಟ್ ನಿರ್ಮಿಸಲು ಗುತ್ತಿಗೆದಾರರ ಮೂಲಕ ಸರ್ಕಾರ ಹೊರಟಿದೆ. ಬೇರೆ ಜಮೀನಿನಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಯೋಚಿಸಬೇಕು. ರೈತರ ಬದುಕಿನ ಜತೆಗೆ ಚಲ್ಲಾಟ ಆಡಬಾರದು’ ಎಂದರು.</p>.<p>ಕಬ್ಬು ಬೆಳೆಗಾರರ ಸಂಘದ ಮುಖಂಡ ಪ್ರವೀಣ ಸರದಾರ ಮಾತನಾಡಿ, ‘ಬದುಕಿಗಾಗಿ ಸಾಗುವಳಿ ಮಾಢುತ್ತಿರುವ ರೈತರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯಬಾರದು. ಸಾಗುವಳಿ ಮಾಡಲು ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ನುಡಿದರು.</p>.<p>ನಾಗರತ್ನ ಪಾಟೀಲ ಮಾತನಾಡಿದರು. ಒಕ್ಕಲೆಬ್ಬಿಸದಂತೆ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಮುಖಂಡರಾದ ನಿಂಗಪ್ಪ ತಡಕೋಡ, ಪಕ್ಕೀರಪ್ಪ ಜಾಂಗಟಿ, ಬಸವರಾಜ ಕೆಳಗಡೆ, ಬಸವಣ್ಣೆಪ್ಪ ಚಲವಾದಿ, ವೆಂಕಟೇಶ ಹಂಚಿನಮನಿ, ಯಲ್ಲಪ್ಪ ಜಾಂಗಟಿ, ಅಣ್ಣಪ್ಪ ಗುಂಜಿ, ಭೀಮಣ್ಣ ಗರಗ, ಮಡಿವಾಳೆಪ್ಪ ಚಿನ್ನನ್ನವರ, ಅಬ್ದುಲ್ ರೆಹಮಾನ್ ಗಡಕರಿ, ಶಬ್ಬೀರಗೌಸ್ ಬೀಡಿ, ಸಂತರಾಮ ಭಾಸ್ಕರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>