‘ಅ. 15ನ್ನು ‘ಗ್ರಾಮೀಣ ಮಹಿಳಾ ದಿನ’ವೆಂದು ವಿಶ್ವ ಸಂಸ್ಥೆ ಹಾಗೂ ‘ಮಹಿಳಾ ರೈತರ ದಿನ’ವೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ‘ಮಹಿಳೆಯರನ್ನು ರೈತರೆಂದು ಗುರುತಿಸಬೇಕು’ ಎಂದು ಮನವಿ ಸಲ್ಲಿಸಲಾಗುವುದು. ಜಾಗೃತ ಮಹಿಳಾ ಒಕ್ಕೂಟ, ಭೂಮಿಗಾಗಿ ಭೂಹೀನರ ಹೋರಾಟ ಸಮಿತಿ ಮತ್ತು ನಮ್ಮೂರ ಭೂಮಿ ನಮಗಿರಲಿ ಆಂದೋಲನದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಭಾಗವಹಿಸಲಿದ್ದಾರೆ’ ಎಂದು ಆಯೋಜಕರಾದ ಸುವರ್ಣಾ ಕುಠಾಳೆ, ಮಹಾನಂದಾ ತಳವಾರ, ಶಾರದಾ ಗೋಪಾಲ ತಿಳಿಸಿದ್ದಾರೆ.