ಹೋಟೆಲ್ ಮಾಲೀಕ ದುರ್ಗಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾಗಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಉಡುಪಿ ಹಾಗೂ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳೆರಡನ್ನು ಹೋಟೆಲ್ನಲ್ಲಿ ಮಾಡಲಾಗುತ್ತದೆ. ಉತ್ತಪ್ಪ, ಮಸಾಲಾ ದೋಸಾ, ಬೆಣ್ಣೆ ದೋಸಾ, ಶಿರಾ, ಉಪ್ಪಿಟ್ಟು, ಟೊಮೆಟೊ ಆಮ್ಲೆಟ್ಗಳನ್ನು ಕೂಡ ರುಚಿಕಟ್ಟಾಗಿ ಸಿದ್ಧಪಡಿಸುತ್ತಾರೆ. ಸ್ವಾದ ಭರಿತ ಚಹಾ ಕೂಡ ಇಲ್ಲಿ ಸಿಗುತ್ತದೆ.