ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ನದಿಗಳ ತೀರದಲ್ಲಿ ರೈತರ ಪಂಪ್‌ಸೆಟ್‌: ತಪ್ಪದ ಪರದಾಟ

ಚಂದ್ರಶೇಖರ ಎಸ್. ಚಿನಕೇಕರ
Published : 1 ಜುಲೈ 2024, 8:44 IST
Last Updated : 1 ಜುಲೈ 2024, 8:44 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಅಳವಡಿಸಿರುವುದು
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಅಳವಡಿಸಿರುವುದು
ಬಾವನ ಸವದತ್ತಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಹೊರ ತೆಗೆಯುತ್ತಿರುವ ರೈತರು – ಪ್ರಜಾವಾಣಿ ಚಿತ್ರ
ಬಾವನ ಸವದತ್ತಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಹೊರ ತೆಗೆಯುತ್ತಿರುವ ರೈತರು – ಪ್ರಜಾವಾಣಿ ಚಿತ್ರ
ಸ್ಥಳಾಂತರಕ್ಕೂ ದುಬಾರಿ ವೆಚ್ಚ
ನದಿ ದಡದಲ್ಲಿ ಅಳವಡಿಸಿದ ಒಮ್ಮೆ ಮೋಟಾರ್ ಪಂಪ್‌ಸೆಟ್ ಸ್ಥಳಾಂತರ ಮಾಡಲು ಕನಿಷ್ಠ 4 ಕಾರ್ಮಿಕರು ಬೇಕು. ಹೀಗೆ 3 ತಿಂಗಳ ಅವಧಿಯಲ್ಲಿ ಕನಿಷ್ಠ ಐದಾರು ಬಾರಿ ಪಂಪ್‌ಸೆಟ್‌ ಜಾಗ ಬಿಟ್ಟು ಜಾಗಕ್ಕೆ ಕೊಂಡೊಯ್ಯಬೇಕಾಗುತ್ತದೆ. ಮಳೆ ಕಡಿಮೆಯಾಗಿ ಹೊಳೆಯ ನೀರು ಇಳಿಮುಖ ಆಗುತ್ತಿದ್ದಂತೆಯೇ ಪುನಃ ಹೊಳೆಯ ಸಮೀಪದಲ್ಲಿಯೇ ಮೋಟಾರುಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ವರ್ಷ ₹25 ಸಾವಿರದಿಂದ ₹30 ಸಾವಿರ ಸ್ಥಳಾಂತರ ಮಾಡಲು ಖರ್ಚು ಮಾಡಬೇಕಾಗಿದೆ. ಕೆಲವೊಮ್ಮೆ ರಾತೋರಾತ್ರಿ ನದಿಯ ನೀರು 4-5 ಅಡಿ ಏರಿಕೆಯಾದ ಉದಾಹರಣೆಗಳು ಸಾಕಷ್ಟು ಇವೆ. ಅಂಥ ಸಂದರ್ಭದಲ್ಲಿ ನದಿ ತೀರದಲ್ಲಿ ಮೋಟಾರು ತರಲು ತೆರಳಿದ್ದ ರೈತರು ಸಾವನ್ನಪ್ಪಿದ ಗಾಯಗೊಂಡ ಹಲವು ಉದಾಹರಣೆಗಳು ಇವೆ. 2019ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಪಂಪ್‌ಸೆಟ್‌ ತರಲು ನದಿಗೆ ಇಳಿದಿದ್ದ ಇಬ್ಬರು ಸಾವನ್ನಪ್ಪಿದ್ದರು. ಇದೇ ಪ್ರವಾಹದಲ್ಲಿ ಬಹುಪಾಲು ಪಂಪಸೆಟ್‌ಗಳು ಕೊಚ್ಚಿ ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT