ಬೆಳಗಾವಿ: ಇಲ್ಲಿ ಮೇ 25ರಿಂದ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕಾಗಿ ಭಾರತ ‘ಎ’ ತಂಡದ ಆಟಗಾರರು ಬುಧವಾರ ಬಂದಿಳಿದರು.
ಶ್ರೀಲಂಕಾ ‘ಎ’ ತಂಡದವರು ಮಂಗಳವಾರವೇ ಬಂದು ತಂಗಿದ್ದಾರೆ. ಭಾರತ ‘ಎ’ ತಂಡದ ಕೋಚ್, ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೂಡ ಆಗಮಿಸಿದರು. ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಎಲ್ಲರೂ ಯುಕೆ–27 ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಉಭಯ ತಂಡದವರೂ ಮೇ 23ರಿಂದ ಆಟೊನಗರದಲ್ಲಿರುವ ಕೆಎಸ್ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದಾರೆ.