<p><strong>ರಾಯಬಾಗ (ಬೆಳಗಾವಿ ಜಿಲ್ಲೆ):</strong> ರಾಯಬಾಗ ಗ್ರಾಮೀಣ ವ್ಯಾಪ್ತಿಯ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ಅಂದಗೊಳಿಸಲಾಗಿದೆ. 1958ರಲ್ಲಿ ಅಸ್ತಿತ್ವಕ್ಕೆ ಬಂದ ಶಾಲೆಗೆ ಈಗ ಜೀವಕಳೆ ಮೂಡಿದೆ.</p>.<p>40 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಶಾಲೆಯ ಅಭಿವೃದ್ಧಿಯಲ್ಲಿ ಮುಖ್ಯಶಿಕ್ಷಕ ಮಹಾಂತೇಶ ಬೋರಗಾವಿ ಮತ್ತು ಶಿಕ್ಷಕ ಹನುಮಂತ ಆಯಟ್ಟಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಂಪರ್ಕಿಸಿ, ಹಣ ಸಂಗ್ರಹಿಸಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ.</p>.<p>ಕೈತೋಟ, ಕಾಂಪೌಂಡ್, ಗೇಟ್, ನೀರಿನ ಟ್ಯಾಂಕ್, ಶೌಚಾಲಯ, ವಿದ್ಯುತ್ ಸೌಲಭ್ಯ, ಆವರಣ ಹಾಗೂ ರಸ್ತೆ ಪೇವರ್ಸ್ ಅಳವಡಿಸಿದ್ದಾರೆ. ಕಲ್ಲಿನ ಗೋಡೆಗಳಿಗೆ ನುಣುಪು ನೀಡಿ ಚಿತ್ತಾಕರ್ಷಕ ಮಾಡಿದ್ದಾರೆ. ಡಿಜಿಟಲ್ ಬ್ಯಾನರ್, ಫ್ಲೆಕ್ಸ್, ಪ್ರೊಜೆಕ್ಟರ್ ಸೇರಿದಂತೆ ಎಲ್ಲ ಕಲಿಕಾ ಸಾಮಗ್ರಿಗಳನ್ನೂ ತರಿಸಿಕೊಂಡಿದ್ದಾರೆ.</p>.<p>ಇಲ್ಲಿನ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಪಾಠಗಳನ್ನು ಅಚ್ಚುಕಟ್ಟಾಗಿ ಓದುತ್ತಾರೆ. ಕ್ರೀಡೆ, ವಿಜ್ಞಾನ, ಪ್ರಚಲಿತ ವಿದ್ಯಮಾನಗಳ ಜೊತೆಗೆ ದೇಶ– ವಿದೇಶಗಳ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡಿದ್ದಾರೆ. ಮಕ್ಕಳ ‘ಸಂವಿಧಾನ ಪೀಠ’ ರಚಿಸಿರುವುದು ವಿಶೇಷ. ಈ ಮೂಲಕ ಸಂವಿಧಾನದ ಆಶಯಗಳ ತಿಳಿವಳಿಕೆ ಮೂಡಿಸಲಾಗುತ್ತಿದೆ.</p>.<p>ಸಹಭಾಗಿತ್ವದ ಮಂತ್ರ: ಶಿಕ್ಷಕರ ಇಚ್ಛಾಶಕ್ತಿ, ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ನಮ್ಮ ಗ್ರಾಮದ ಶಾಲೆಯೇ ಉದಾಹರಣೆ. ಜಾತ್ರೆಗೆ ಪಟ್ಟಿ ಹಾಕುವ ಬದಲು ಶಾಲೆ ಸುಧಾರಣೆಗೆ ಹಣ ಸಂಗ್ರಹಿಸಲಾಗಿದೆ. ಈ ಶಾಲೆಯಲ್ಲಿ ಓದುವವರು ಕೃಷಿ, ಕೂಲಿ ಕಾರ್ಮಿಕರ ಮಕ್ಕಳು. ಶಾಲೆಯಿಂದ ವಿಮುಖರಾಗಿದ್ದ ಮಕ್ಕಳನ್ನು ನಲಿ-ಕಲಿ ಮೂಲಕ ಮತ್ತೆ ಕರೆತರಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.</p>.<div><blockquote>ಈ ಶಾಲೆಯಲ್ಲಿ ಕಲಿಯಲು ಹೆಮ್ಮೆ ಇದೆ. ಶಾಲೆಗೆ ಸಿಮೆಂಟ್ ಚಾವಣಿ ಬೇಕಿದೆ. ಶಿಕ್ಷಣಾಧಿಕಾರಿಗಳು ಸಚಿವರು ಇದರತ್ತ ಗಮನ ಹರಿಸಬೇಕು</blockquote><span class="attribution">ಸ್ವಾತಿ ನೇಮಿನಾಥ ಚೌಗುಲಾ ವಿದ್ಯಾರ್ಥಿನಿ</span></div>.<div><blockquote>ಗ್ರಾಮ ಪಂಚಾಯಿತಿ ಸದಸ್ಯರು ಪಾಲಕರ ನೆರವಿನಿಂದ ಶಾಲೆ ಹೈಟೆಕ್ ಆಗಿದೆ. ಇನ್ನೂ ನೆರವು ಸಿಕ್ಕರೆ ಕಂಪ್ಯೂಟರ್ ಶಿಕ್ಷಣ ನೀಡುತ್ತೇವೆ.</blockquote><span class="attribution">ಹನುಮಂತ ಆಯಟ್ಟಿ ಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಳದ ಹರಿ ತೋಟ</span></div>.<div><blockquote>- ಶಾಲೆಗೆ ಬಂದರೆ ಮತ್ತೆ ಮನೆಗೆ ಹೋಗಲು ಆಗುವುದಿಲ್ಲ. ಸುತ್ತಲಿನ ಹಸಿರು ಪರಿಸರದಲ್ಲಿ ಆಟವಾಡುವುದೇ ಸಂಭ್ರಮ.</blockquote><span class="attribution">ಬಸವರಾಜ ಸತ್ಯಪ್ಪ ಬಂತೆ ವಿದ್ಯಾರ್ಥಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ (ಬೆಳಗಾವಿ ಜಿಲ್ಲೆ):</strong> ರಾಯಬಾಗ ಗ್ರಾಮೀಣ ವ್ಯಾಪ್ತಿಯ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ಅಂದಗೊಳಿಸಲಾಗಿದೆ. 1958ರಲ್ಲಿ ಅಸ್ತಿತ್ವಕ್ಕೆ ಬಂದ ಶಾಲೆಗೆ ಈಗ ಜೀವಕಳೆ ಮೂಡಿದೆ.</p>.<p>40 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಶಾಲೆಯ ಅಭಿವೃದ್ಧಿಯಲ್ಲಿ ಮುಖ್ಯಶಿಕ್ಷಕ ಮಹಾಂತೇಶ ಬೋರಗಾವಿ ಮತ್ತು ಶಿಕ್ಷಕ ಹನುಮಂತ ಆಯಟ್ಟಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಂಪರ್ಕಿಸಿ, ಹಣ ಸಂಗ್ರಹಿಸಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ.</p>.<p>ಕೈತೋಟ, ಕಾಂಪೌಂಡ್, ಗೇಟ್, ನೀರಿನ ಟ್ಯಾಂಕ್, ಶೌಚಾಲಯ, ವಿದ್ಯುತ್ ಸೌಲಭ್ಯ, ಆವರಣ ಹಾಗೂ ರಸ್ತೆ ಪೇವರ್ಸ್ ಅಳವಡಿಸಿದ್ದಾರೆ. ಕಲ್ಲಿನ ಗೋಡೆಗಳಿಗೆ ನುಣುಪು ನೀಡಿ ಚಿತ್ತಾಕರ್ಷಕ ಮಾಡಿದ್ದಾರೆ. ಡಿಜಿಟಲ್ ಬ್ಯಾನರ್, ಫ್ಲೆಕ್ಸ್, ಪ್ರೊಜೆಕ್ಟರ್ ಸೇರಿದಂತೆ ಎಲ್ಲ ಕಲಿಕಾ ಸಾಮಗ್ರಿಗಳನ್ನೂ ತರಿಸಿಕೊಂಡಿದ್ದಾರೆ.</p>.<p>ಇಲ್ಲಿನ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಪಾಠಗಳನ್ನು ಅಚ್ಚುಕಟ್ಟಾಗಿ ಓದುತ್ತಾರೆ. ಕ್ರೀಡೆ, ವಿಜ್ಞಾನ, ಪ್ರಚಲಿತ ವಿದ್ಯಮಾನಗಳ ಜೊತೆಗೆ ದೇಶ– ವಿದೇಶಗಳ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡಿದ್ದಾರೆ. ಮಕ್ಕಳ ‘ಸಂವಿಧಾನ ಪೀಠ’ ರಚಿಸಿರುವುದು ವಿಶೇಷ. ಈ ಮೂಲಕ ಸಂವಿಧಾನದ ಆಶಯಗಳ ತಿಳಿವಳಿಕೆ ಮೂಡಿಸಲಾಗುತ್ತಿದೆ.</p>.<p>ಸಹಭಾಗಿತ್ವದ ಮಂತ್ರ: ಶಿಕ್ಷಕರ ಇಚ್ಛಾಶಕ್ತಿ, ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ನಮ್ಮ ಗ್ರಾಮದ ಶಾಲೆಯೇ ಉದಾಹರಣೆ. ಜಾತ್ರೆಗೆ ಪಟ್ಟಿ ಹಾಕುವ ಬದಲು ಶಾಲೆ ಸುಧಾರಣೆಗೆ ಹಣ ಸಂಗ್ರಹಿಸಲಾಗಿದೆ. ಈ ಶಾಲೆಯಲ್ಲಿ ಓದುವವರು ಕೃಷಿ, ಕೂಲಿ ಕಾರ್ಮಿಕರ ಮಕ್ಕಳು. ಶಾಲೆಯಿಂದ ವಿಮುಖರಾಗಿದ್ದ ಮಕ್ಕಳನ್ನು ನಲಿ-ಕಲಿ ಮೂಲಕ ಮತ್ತೆ ಕರೆತರಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.</p>.<div><blockquote>ಈ ಶಾಲೆಯಲ್ಲಿ ಕಲಿಯಲು ಹೆಮ್ಮೆ ಇದೆ. ಶಾಲೆಗೆ ಸಿಮೆಂಟ್ ಚಾವಣಿ ಬೇಕಿದೆ. ಶಿಕ್ಷಣಾಧಿಕಾರಿಗಳು ಸಚಿವರು ಇದರತ್ತ ಗಮನ ಹರಿಸಬೇಕು</blockquote><span class="attribution">ಸ್ವಾತಿ ನೇಮಿನಾಥ ಚೌಗುಲಾ ವಿದ್ಯಾರ್ಥಿನಿ</span></div>.<div><blockquote>ಗ್ರಾಮ ಪಂಚಾಯಿತಿ ಸದಸ್ಯರು ಪಾಲಕರ ನೆರವಿನಿಂದ ಶಾಲೆ ಹೈಟೆಕ್ ಆಗಿದೆ. ಇನ್ನೂ ನೆರವು ಸಿಕ್ಕರೆ ಕಂಪ್ಯೂಟರ್ ಶಿಕ್ಷಣ ನೀಡುತ್ತೇವೆ.</blockquote><span class="attribution">ಹನುಮಂತ ಆಯಟ್ಟಿ ಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಳದ ಹರಿ ತೋಟ</span></div>.<div><blockquote>- ಶಾಲೆಗೆ ಬಂದರೆ ಮತ್ತೆ ಮನೆಗೆ ಹೋಗಲು ಆಗುವುದಿಲ್ಲ. ಸುತ್ತಲಿನ ಹಸಿರು ಪರಿಸರದಲ್ಲಿ ಆಟವಾಡುವುದೇ ಸಂಭ್ರಮ.</blockquote><span class="attribution">ಬಸವರಾಜ ಸತ್ಯಪ್ಪ ಬಂತೆ ವಿದ್ಯಾರ್ಥಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>