ಹೆಗ್ಗೋಳ್ಳ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯು ನೀರಿನ ರಭಸಕ್ಕೆ ಹಾಳಾಗಿದೆ. ಗ್ರಾಮದಲ್ಲಿ ಸವಣೂರು ನವಾಬರು ಕಟ್ಟಿಸಿದ ಕೆರೆ ಸಂಪೂರ್ಣ ತುಂಬಿ ಹೆಚ್ಚಾದ ನೀರು ಕೆಳಗಿನ ಹೊಲಗದ್ದೆಗಳಿಗೆ ನುಗ್ಗಿದ್ದರಿಂದ ಅವು ಕೆರೆಯಂತಾಗಿವೆ. ಹಳ್ಳದ ನೀರಿನ ರಭಸಕ್ಕೆ ಗೋವಿನ ಜೋಳ, ಕಬ್ಬು, ಚೆಂಡು ಹೂವು ಮೊದಲಾದ ಬೆಳೆಗಳು ನೀರು ಪಾಲಾಗಿದ್ದು, ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.