‘ಮಹಾತ್ಮ ಗಾಂಧೀಜಿ, ಬಸವೇಶ್ವರ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು ಮತ್ತು ಸಂವಿಧಾದನ ಆಶಯಗಳಿಗೆ ಅನುಸಾರ ನಾವು ಕೆಲಸ ಮಾಡಬೇಕು. ಆದರೆ, ಅದರಂತೆ ನಾವು ಕೆಲಸ ಮಾಡದ ಕಾರಣ ಶಾಸಕಾಂಗ, ಕಾರ್ಯಾಂಗದ ಕೆಲ ವೈಫಲ್ಯಗಳ ಬಗ್ಗೆ ಮಾತನಾಡಿದ್ದೇನೆ. ನಾನು ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ, ಅದು ನನ್ನ ತಪ್ಪಲ್ಲ’ ಎಂದರು.