ಇದನ್ನು ಪ್ರಶ್ನಿಸಿ ರಮಾಕಾಂತ ಅವರು ಹೈಕೋರ್ಟ್ನ ಧಾರವಾಡ ಪೀಠದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಹೈಕೋರ್ಟ್ ಪೀಠವು ನಗರ ಪೊಲೀಸ್ ಕಮಿಷನರ್ರಿಂದ ಮಾಹಿತಿ ಕೇಳಿತ್ತು. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಇದ್ದು, ಅಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದ ಬಗ್ಗೆ ಪೊಲೀಸ್ ಕಮಿಷನರ್ ವಿವರ ನೀಡಿದ್ದರು. ಇದನ್ನು ಆಧರಿಸಿ ಹೈಕೋರ್ಟ್ ಪೀಠ ಕೊಂಡೂಸ್ಕರ್ ಅವರ ಅರ್ಜಿ ತಿರಸ್ಕರಿಸಿದೆ.