<p><strong>ಅಥಣಿ:</strong> ‘ದಕ್ಷಿಣ ಕಾಶಿ’ ಖ್ಯಾತಿಯ ತಾಲ್ಲೂಕಿನ ರಾಮತೀರ್ಥ ಕ್ಷೇತ್ರದಲ್ಲಿ ಈಗ ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದೆ. ಶಿವನಾಮ ಸ್ಮರಣೆ, ಉಪಾಸನೆಗೆ ಭಕ್ತರು ಸಜ್ಜಾಗಿದ್ದಾರೆ. </p>.<p>ಮಹಾಶಿವರಾತ್ರಿ ಪ್ರಯುಕ್ತ ಫೆ.15ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. </p>.<p>ಬಂಡೆಗಲ್ಲು ಕೊರೆದು ದೇವಸ್ಥಾನ ನಿರ್ಮಿಸಿರುವುದನ್ನು ಗಮನಿಸಿದರೆ, ಇದು ದ್ರಾವಿಡರ ಕಾಲದ ಶಿಲ್ಪಕಲೆ ಆಗಿರಬಹುದು ಎಂಬುದು ಕೆಲವರ ಅಭಿಪ್ರಾಯ.</p>.<p>ಗರ್ಭಗೃಹ, ನವರಂಗ ಹಾಗೂ ಸುಖನಾಸಿ ಎಂಬ ಮೂರು ಗುಡಿಗಳ ಮುಂದೆ ಇರುವ ನಂದಿ ವಿಗ್ರಹ ಒಂದೇ. ನವರಂಗದ ಚಾವಣಿಯಲ್ಲಿ ವಾಸ್ತುಶಿಲ್ಪಿಗಳ ಕಲಾನೈಪುಣ್ಯತೆ ಕಣ್ಮನಸೆಳೆಯುತ್ತದೆ. ದೇವಾಲಯದ ಮುಂಭಾಗದ ಒಂದು ಬದಿಯಲ್ಲಿರುವ ಒಂಬತ್ತು ಅಡಿಗಳ ದೀಪಸ್ತಂಭ ನಯನ ಮನೋಹರವಾಗಿದೆ.</p>.<p>11 ಮತ್ತು 12ನೇ ಶತಮಾನದ ಅನೇಕ ಶಾಸನಗಳು, ಕಲಾಕೃತಿಗಳನ್ನು ಇದು ಒಳಗೊಂಡಿದೆ. ಈ ದೇವಸ್ಥಾನದ ಬಗ್ಗೆ ಪುರಾಣದಲ್ಲಿ ಸಹ ಉಲ್ಲೇಖವಿದೆ.</p>.<p>ದೇವಸ್ಥಾನದ ಹಿಂದೆ ಪಾರ್ವತಿ ದೇವಸ್ಥಾನವಿದೆ. ಏಕಶಿಲೆಯನ್ನು ಒಡೆದು ಪ್ರಾಂಗಣ ಮಾಡಿ, ಈ ದೇವಸ್ಥಾನ ನಿರ್ಮಿಸಲಾಗಿದೆ. ನವರಂಗದಲ್ಲಿ ನಿಂತಾಗ ದಕ್ಷಿಣ ಮತ್ತು ಉತ್ತರಕ್ಕೂ ಒಂದೊಂದು ಲಿಂಗವಿರುವ ಗರ್ಭಗೃಹ ನೋಡಬಹುದು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಮೂರು ರೂಪದ ವಿಗ್ರಹಗಳು ಲಿಂಗದ ರೂಪದಲ್ಲಿ ಇರುವುದು ವಿಶೇಷ.</p>.<p>ಶತಮಾನಗಳ ಇತಿಹಾಸ ಹೊಂದಿರುವ ರಾಮತೀರ್ಥ ಗ್ರಾಮದಲ್ಲಿ ವೈಭವದಿಂದ ಶಿವರಾತ್ರಿ ಉತ್ಸವ ಆಚರಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ದಕ್ಷಿಣ ಕಾಶಿ’ ಖ್ಯಾತಿಯ ತಾಲ್ಲೂಕಿನ ರಾಮತೀರ್ಥ ಕ್ಷೇತ್ರದಲ್ಲಿ ಈಗ ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದೆ. ಶಿವನಾಮ ಸ್ಮರಣೆ, ಉಪಾಸನೆಗೆ ಭಕ್ತರು ಸಜ್ಜಾಗಿದ್ದಾರೆ. </p>.<p>ಮಹಾಶಿವರಾತ್ರಿ ಪ್ರಯುಕ್ತ ಫೆ.15ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. </p>.<p>ಬಂಡೆಗಲ್ಲು ಕೊರೆದು ದೇವಸ್ಥಾನ ನಿರ್ಮಿಸಿರುವುದನ್ನು ಗಮನಿಸಿದರೆ, ಇದು ದ್ರಾವಿಡರ ಕಾಲದ ಶಿಲ್ಪಕಲೆ ಆಗಿರಬಹುದು ಎಂಬುದು ಕೆಲವರ ಅಭಿಪ್ರಾಯ.</p>.<p>ಗರ್ಭಗೃಹ, ನವರಂಗ ಹಾಗೂ ಸುಖನಾಸಿ ಎಂಬ ಮೂರು ಗುಡಿಗಳ ಮುಂದೆ ಇರುವ ನಂದಿ ವಿಗ್ರಹ ಒಂದೇ. ನವರಂಗದ ಚಾವಣಿಯಲ್ಲಿ ವಾಸ್ತುಶಿಲ್ಪಿಗಳ ಕಲಾನೈಪುಣ್ಯತೆ ಕಣ್ಮನಸೆಳೆಯುತ್ತದೆ. ದೇವಾಲಯದ ಮುಂಭಾಗದ ಒಂದು ಬದಿಯಲ್ಲಿರುವ ಒಂಬತ್ತು ಅಡಿಗಳ ದೀಪಸ್ತಂಭ ನಯನ ಮನೋಹರವಾಗಿದೆ.</p>.<p>11 ಮತ್ತು 12ನೇ ಶತಮಾನದ ಅನೇಕ ಶಾಸನಗಳು, ಕಲಾಕೃತಿಗಳನ್ನು ಇದು ಒಳಗೊಂಡಿದೆ. ಈ ದೇವಸ್ಥಾನದ ಬಗ್ಗೆ ಪುರಾಣದಲ್ಲಿ ಸಹ ಉಲ್ಲೇಖವಿದೆ.</p>.<p>ದೇವಸ್ಥಾನದ ಹಿಂದೆ ಪಾರ್ವತಿ ದೇವಸ್ಥಾನವಿದೆ. ಏಕಶಿಲೆಯನ್ನು ಒಡೆದು ಪ್ರಾಂಗಣ ಮಾಡಿ, ಈ ದೇವಸ್ಥಾನ ನಿರ್ಮಿಸಲಾಗಿದೆ. ನವರಂಗದಲ್ಲಿ ನಿಂತಾಗ ದಕ್ಷಿಣ ಮತ್ತು ಉತ್ತರಕ್ಕೂ ಒಂದೊಂದು ಲಿಂಗವಿರುವ ಗರ್ಭಗೃಹ ನೋಡಬಹುದು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಮೂರು ರೂಪದ ವಿಗ್ರಹಗಳು ಲಿಂಗದ ರೂಪದಲ್ಲಿ ಇರುವುದು ವಿಶೇಷ.</p>.<p>ಶತಮಾನಗಳ ಇತಿಹಾಸ ಹೊಂದಿರುವ ರಾಮತೀರ್ಥ ಗ್ರಾಮದಲ್ಲಿ ವೈಭವದಿಂದ ಶಿವರಾತ್ರಿ ಉತ್ಸವ ಆಚರಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>