ಕೊಳ್ಳಗಳ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಅರಣ್ಯದಲ್ಲಿರುವ ಪ್ರಾಕೃತಿಕ ಸೊಬಗು ಮರೆಯಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಜಲಪಾತ ಝರಿಗಳು ಪ್ರಕೃತಿ ಸೌಂದರ್ಯ ಉಳಿಸಿಕೊಳ್ಳಬೇಕಿದೆ.
–ಪಾಂಡುರಂಗ ಜಟಗನ್ನವರ ಪರಿಸರವಾದಿ
ತಾಲ್ಲೂಕಿನಲ್ಲಿ ಎಂಟು ಅದ್ಬುತ ಕೊಳ್ಳಗಳಿವೆ. ಚಿಕ್ಕವರಿದ್ದಾಗ ಶಬರಿ ಕೊಳ್ಳ ಬಿಟ್ಟರೆ ಉಳಿದವುಗಳ ಮಾಹಿತಿ ಇರಲಿಲ್ಲ. ರಾಮದುರ್ಗ ತಾಲ್ಲೂಕಿಗೆ ಕೊಡುಗೆಯಾಗಿರುವ ಕೊಳ್ಳಗಳ ಅಭಿವೃದ್ಧಿಯ ಅಗತ್ಯತೆ ಇದೆ.
–ಡಾ.ಪೂರ್ಣಿಮಾ ಗೌರೋಜಿ ಪರಿಸರವಾದಿ
ರಾಮದುರ್ಗ ತಾಲ್ಲೂಕಿನ ಅರಣ್ಯದಲ್ಲಿ ಪ್ರವಾಸಿ ತಾಣಗಳಂತಿರುವ ಕೊಳ್ಳಗಳು ಸಾಕಷ್ಟಿವೆ. ಕೊಳ್ಳಗಳ ಅಭಿವೃದ್ಧಿಗೆ ವಿಶೇಷ ಅನುದಾನ ಇರುವುದಿಲ್ಲ.
–ಭಾಗ್ಯಶ್ರೀ ಮಸಳಿ ವಲಯ ಅರಣ್ಯಾಧಿಕಾರಿ
ಕೊಳ್ಳಗಳು ಝರಿಗಳು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಬಹುದು. ಆದರೆ ರಾಮದುರ್ಗದಂತಹ ಬಯಲು ಸೀಮೆಯಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಕೊಳ್ಳಗಳ (ಪ್ರವಾಸಿ ತಾಣಗಳ) ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ
–ವಿಜಯ ನಾಯಕ ಹೋರಾಟಗಾರ
ರಾಮದುರ್ಗ ತಾಲ್ಲೂಕಿನಲ್ಲಿ ಏಳಕ್ಕೂ ಹೆಚ್ಚಿನ ಪ್ರವಾಸಿ ತಾಣಗಳಂತೆ ಸ್ವಯಂ ನಿರ್ಮಿತ ಕೊಳ್ಳಗಳಿವೆ. ಅವುಗಳನ್ನು ಸಾರ್ವಜನಿಕರ ಉಪಯುಕ್ತತೆಗೆ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆಯಲಾಗುವುದು.