‘ಅವರು ಮತ್ತೊಮ್ಮೆ ಮುಂಬೈಗೆ ತೆರಳಿ, ಮಹಾರಾಷ್ಟ್ರದ ವಿಧಾನಸಭೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಸೇರಿದಂತೆ ಬಿಜೆಪಿ ನಾಯಕರನ್ನು ಭೇಟಿ ಆಗಲಿದ್ದಾರೆ. ಅವರಿಗೆ ಹೈಕಮಾಂಡ್ನಿಂದಲೂ ಬುಲಾವ್ ಬಂದಿದೆ’ ಎಂಬ ವದಂತಿಗಳು ಹರಡಿದ್ದವು. ‘ನನ್ನ ರಾಜೀನಾಮೆ ವಿಷಯವು ಮುಂಬೈನಲ್ಲಿ ತೀರ್ಮಾನವಾಗಲಿದೆ’ ಎಂದು ಅವರು ಹೇಳಿದ್ದರಿಂದ ಭೇಟಿ ಬಗ್ಗೆ ಕುತೂಹಲ ಉಂಟಾಗಿತ್ತು. ಈ ನಡುವೆ, ಅವರು ಸೋಮವಾರ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.