ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನ.1ರಂದು ಪ್ರತಿಮೆ ಪ್ರತಿಷ್ಠಾಪಿಸದಂತೆ ತಡೆದರು. ನಮ್ಮನ್ನು ವಶಕ್ಕೆ ಪಡೆದರು. ಕಾಕತಿಯ ಮೂರ್ತಿಕಾರ ಮಹೇಶ ಮಾಸೇಕರ ಅವರ ಮೇಲೆ ಬೂಟಿನಿಂದ ಒದ್ದು, ತಲೆಗೆ ಹೊಡೆದು ಅವಮಾನಿಸಿದರು. ನಮ್ಮನ್ನು ಭಯೋತ್ಪಾದಕರ ರೀತಿಯಲ್ಲಿ ನಡೆಸಿಕೊಂಡರು. ಕೆಟ್ಟದಾಗಿ ಬೈದರು’ ಎಂದು ದೂರಿದರು.