‘ಈವರೆಗೆ 1,400 ಮಂದಿ ಮಾತ್ರ ಅಭಿಪ್ರಾಯ ದಾಲಿಸಿದ್ದಾರೆ. 10ಸಾವಿರ ಜನರಾದರೂ ಪಾಲ್ಗೊಳ್ಳಬೇಕು. ಶಿಕ್ಷಣ, ಆರೋಗ್ಯ, ಪರಿಸರ, ವಸತಿ, ಶುಚಿತ್ವ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಾರಿಗೆ, ಸುರಕ್ಷತೆ ಮೊದಲಾದ 24 ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಯೋಜನೆ ರೂಪಿಸುವಾಗ ಈ ಅಭಿಪ್ರಾಯಗಳು ಪರಿಗಣನೆಗೆ ಬರಲಿವೆ’ ಎಂದು ಮಾಹಿತಿ ನೀಡಿದ್ದಾರೆ.