ಸರ್ಕಾರ ರಚಿಸುವ ಪ್ರಬಲ ಅಸ್ತ್ರವಾದ ಮತವನ್ನು ಆಮಿಷಕ್ಕೆ ಬಲಿಯಾಗಿ ದುಡ್ಡಿಗೆ ಮಾರಾಟ ಮಾಡಿಕೊಳ್ಳುವುದು ಸರಿಯಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಮತ ಮಾರಾಟದಿಂದ ಜನ ಭ್ರಷ್ಟರಾದರೆ, ಮತ ಖರೀದಿಸುವ ಭ್ರಷ್ಟ ರಾಜಕಾರಣಿ ಮತ್ತಷ್ಟು ಭ್ರಷ್ಟನಾಗುತ್ತಾನೆ. ಹಾಗಾಗಿ, ಮತ ಮಾರಾಟ ಪ್ರಕ್ರಿಯೆ ನಿಂತರೆ ಮಾತ್ರ ಬಡವರ ಪರ ಸರ್ಕಾರ ಸ್ಥಾಪನೆಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.