ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಹಮ್ಮನವರ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ನಿಂಗಮ್ಮ ನಡುವಿನ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಸ್. ತಳವಾರ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಮುಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಸೋಮನಟ್ಟಿ, ಅಜ್ಜಪ್ಪ ಹರಿಜನ, ಎಸ್ಡಿಎಂಸಿ ಸದಸ್ಯರು, ಸಿದ್ದಪ್ಪ ತುಬಾಕಿ, ಲಕ್ಷ್ಮಿ ದೇವರಮನಿ, ವಿಠ್ಠಲ ಸರ್ವಿ, ವಿಠ್ಠಲ ಚುಂಚನೂರ, ಮುಖ್ಯಶಿಕ್ಷಕ ಎಂ.ಐ. ಬೂಗುರ ಇದ್ದರು.