‘ಗಾಂಧಿನಗರದಿಂದ ಪ್ರತಿಭಟನಾ ರ್ಯಾಲಿ ನಡೆಸಲು ಅನುಮತಿ ಇಲ್ಲ. 10 ಮುಖಂಡರು ವಾಹನದಲ್ಲಿ ತೆರಳಿ ಮಾಲಾರ್ಪಣೆ ಮಾಡಿ ನಂತರ, ವಾಹನ ಮೂಲಕ ಸುವರ್ಣ ವಿಧಾನಸೌಧದವರೆಗೆ ತೆರಳಬಹುದು’ ಎಂದು ಪೊಲೀಸರು ಸಮಾಜಾಯಿಷಿ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರಾರರು, ನಮ್ಮದು ಪ್ರತಿಭಟನೆ ಅಲ್ಲ ಜಾಗೃತಿ ರ್ಯಾಲಿ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಎಲ್ಲರನ್ನೂ ಬಸ್ಸಿನಲ್ಲಿ ಹತ್ತಿಸಿ ಸುವರ್ಣಸೌಧಕ್ಕೆ ಕರೆದೊಯ್ದರು.