ದೇಹ ಹಾಗೂ ಚರ್ಮ ದಾನದ ಜಾಗೃತಿ ಮೂಡಿಸುವ ಗೀತೆ ಇದಾಗಿದೆ. ಸದಾಶಿವ ಹಿರೇಮಠ ಛಾಯಾಗ್ರಾಹಣ ಮತ್ತು ನಿರ್ದೇಶನ ಮಾಡಿದ್ದಾರೆ. ಮಂಜು ಕವಿ ಸಂಗೀತ, ಸಾಹಿತ್ಯ ನೀಡಿದ್ದಾರೆ. ಕಲಾವಿದರಾದ ಪಿ.ದೀಕ್ಷಿತ, ಶಿವಲಿಂಗೇಗೌಡ, ಎಸ್. ಲೂಯಿಸ್, ಸಕ್ಕೂಬಾಯಿ ಪಾತ್ರ ನಿರ್ವಹಿಸಿದ್ದಾರೆ. ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸುಶೀಲಾದೇವಿ ರಾಮಣ್ಣವರ ಹಾಗೂ ಕೆಎಲ್ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಇದ್ದರು.