ಇಲ್ಲಿನ ಎಸ್ಪಿಎಂ ರಸ್ತೆಯಲ್ಲಿ ರವೀಂದ್ರ ಕೌಶಿಕ್ ಇ–ಗ್ರಂಥಾಲಯ ಉದ್ಘಾಟಿಸಿದ ಮುಖ್ಯಮಂತ್ರಿ ಭಾಷಣ ಆರಂಭಿಸಿದ್ದರು. ಆಗ ವೇದಿಕೆಯತ್ತ ನುಗ್ಗುತ್ತಿದ್ದ ಅಭಿಮಾನಿಯನ್ನು ಪೊಲೀಸರು ತಡೆದರು. ಅದನ್ನು ಗಮನಿಸಿದ ಬೊಮ್ಮಾಯಿ, ವೇದಿಕೆ ಕಡೆ ಬರಲು ಅವರಿಗೆ ಅನುವು ಮಾಡಿಕೊಡುವಂತೆ ನಿರ್ದೇಶನ ನೀಡಿದರು. ಬಳಿಕ, ಅವರಿಂದ ಡಬ್ಬಿ ಪಡೆದು ನಮಸ್ಕರಿಸಿದರು.