‘ನೆರವಿಗೆ ಕಾಯುತ್ತಿದೆ ‘ಆಟ’ ಶೀರ್ಷಿಕೆಯಡಿ ಫೆ.11ರಂದು ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯಿಸಿದ ಅವರು, ‘ರಾಜಸ್ಥಾನ, ಪಂಜಾಬ್, ಒಡಿಶಾ, ಹರಿಯಾಣ ರಾಜ್ಯಗಳಲ್ಲಿ ಕ್ರೀಡೆಗೆ ಮೀಸಲಿಟ್ಟಿರುವ ಬಜೆಟ್ ಪ್ರಮಾಣ ಹೆಚ್ಚಿದೆ. ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೆಚ್ಚಿದ್ದಾರೆ. ಆದರೆ, ಅನುದಾನದ ಪ್ರಮಾಣ ಕಡಿಮೆ. ಕ್ರೀಡಾ ಹಾಸ್ಟೆಲ್ಗಳು ಮತ್ತು ಕ್ರೀಡಾಂಗಣಗಳಲ್ಲಿ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಇವುಗಳನ್ನೆಲ್ಲ ಬಗೆಹರಿಸಿ, ಕ್ರೀಡಾಪಟುಗಳಿಗೆ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬೇಕಿದೆ’ ಎಂದರು.