ಆದರೆ, 2 ಗಂಟೆಗಳ ಬಳಿಕವಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಬಂದರು. ಅಲ್ಲಿವರೆಗೂ ವಿಲವಿಲನೆ ಒದ್ದಾಡಿ ಜಿಂಕೆ ಕೊನೆಯುಸಿರೆಳೆದಿದೆ. ಜಿಂಕೆ ಮೃತಪಟ್ಟ ಬಳಿಕ ಬಂದ ಅರಣ್ಯ ಇಲಾಖೆಯವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಕಾಲದಲ್ಲಿ ಬಂದಿದ್ದರೆ ಈ ಪ್ರಾಣಿಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಬಿಸಿ ಮುಟ್ಟಿಸಿದರು ಎಂದು ತಿಳಿದುಬಂದಿದೆ. ನಂತರ ಕಳೆಬರವನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹೋದರು.