<p><strong>ಬೆಳಗಾವಿ:</strong> ಇಲ್ಲಿಂದ ತಾಲ್ಲೂಕಿನ ದೇಸೂರುವರೆಗೆ ಸಿದ್ಧವಾಗಿರುವ ಜೋಡಿ ರೈಲು ಮಾರ್ಗ(10.87 ಕಿ.ಮೀ.)ದಲ್ಲಿನ ಸುರಕ್ಷತೆಯನ್ನು ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ಕುಮಾರ್ ರೈ ಬುಧವಾರ ಪರಿಶೀಲಿಸಿದರು.</p>.<p>ಅವರು ಹಾಗೂ ಅಧಿಕಾರಿಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು.</p>.<p>ಕೆಲವೇ ದಿನಗಳಲ್ಲಿ ಮುಂದಿನ ಹಂತದ ಕಾಮಗಾರಿ ಅಂದರೆ ಸುಲಧಾಳವರೆಗೆ (68 ಕಿ.ಮೀ.) ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ. ಲೋಂಡಾ–ಮೀರಜ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ ಕಾಮಗಾರಿ ಪ್ರಗತಿಯಲ್ಲಿದೆ. 2016ರಲ್ಲಿ ಮಂಜೂರಾದ ಈ ಯೋಜನೆಯು ₹ 1,190 ಕೋಟಿ ಮೊತ್ತದ್ದಾಗಿದೆ. ಬುಧವಾರ ಶಾಸನಬದ್ಧ ಪರಿಶೀಲನೆಗೆ ಒಳಪಪಟ್ಟ ಮಾರ್ಗವೂ ಸೇರಿದಂತೆ ಈವರೆಗೆ ಒಟ್ಟು 56 ಕಿ.ಮೀ. ಸಿದ್ಧಗೊಂಡಂತಾಗಿದೆ.</p>.<p>‘ಲೋಂಡಾ–ಮೀರಜ್ ಜೋಡಿ ಮಾರ್ಗ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯಮ ಮತ್ತು ಸಂಪರ್ಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್ಗೂ ಪೂರಕವಾಗಿರಲಿದೆ’ ಎಂದು ಅಭಯ್ಕುಮಾರ್ ಹೇಳಿದರು.</p>.<p>ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಾಳಖೇಡ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ದೇಶ್ ರತನ್ ಗುಪ್ತ ಹಾಗೂ ವಿಭಾಗದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿಂದ ತಾಲ್ಲೂಕಿನ ದೇಸೂರುವರೆಗೆ ಸಿದ್ಧವಾಗಿರುವ ಜೋಡಿ ರೈಲು ಮಾರ್ಗ(10.87 ಕಿ.ಮೀ.)ದಲ್ಲಿನ ಸುರಕ್ಷತೆಯನ್ನು ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ಕುಮಾರ್ ರೈ ಬುಧವಾರ ಪರಿಶೀಲಿಸಿದರು.</p>.<p>ಅವರು ಹಾಗೂ ಅಧಿಕಾರಿಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು.</p>.<p>ಕೆಲವೇ ದಿನಗಳಲ್ಲಿ ಮುಂದಿನ ಹಂತದ ಕಾಮಗಾರಿ ಅಂದರೆ ಸುಲಧಾಳವರೆಗೆ (68 ಕಿ.ಮೀ.) ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ. ಲೋಂಡಾ–ಮೀರಜ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ ಕಾಮಗಾರಿ ಪ್ರಗತಿಯಲ್ಲಿದೆ. 2016ರಲ್ಲಿ ಮಂಜೂರಾದ ಈ ಯೋಜನೆಯು ₹ 1,190 ಕೋಟಿ ಮೊತ್ತದ್ದಾಗಿದೆ. ಬುಧವಾರ ಶಾಸನಬದ್ಧ ಪರಿಶೀಲನೆಗೆ ಒಳಪಪಟ್ಟ ಮಾರ್ಗವೂ ಸೇರಿದಂತೆ ಈವರೆಗೆ ಒಟ್ಟು 56 ಕಿ.ಮೀ. ಸಿದ್ಧಗೊಂಡಂತಾಗಿದೆ.</p>.<p>‘ಲೋಂಡಾ–ಮೀರಜ್ ಜೋಡಿ ಮಾರ್ಗ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯಮ ಮತ್ತು ಸಂಪರ್ಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್ಗೂ ಪೂರಕವಾಗಿರಲಿದೆ’ ಎಂದು ಅಭಯ್ಕುಮಾರ್ ಹೇಳಿದರು.</p>.<p>ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಾಳಖೇಡ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ದೇಶ್ ರತನ್ ಗುಪ್ತ ಹಾಗೂ ವಿಭಾಗದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>