ಕೆಲವೊಂದು ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಅಥವಾ ತಾಂತ್ರಿಕ ತೊಂದರೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಆದರೆ ಅದನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಜತೆ ತಕ್ಷಣ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು ಎಂದರು. ಪುರಸಭೆ ಜೆಇ ಗೌರಿಶಂಕರ ಮಹಾಳಂಕ ಮತ್ತು ಮುಖ್ಯಾಧಿಕಾರಿ ಮೋಹನ್ ಜಾಧವ್ ಪಟ್ಟಣಕ್ಕೆ ಬರುವ ನೀರಿನ ಪ್ರಮಾಣ ಮತ್ತು ವಿತರಣೆ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಅಣ್ಣಾಗೌಡ ಪಾಟೀಲ, ವರ್ತಕ ಚನ್ನಪ್ಪ ಗಜಬರ, ಸುಭಾಸ ನಾಯಿಕ, ಪುಟ್ಟು ಖಾಡೆ, ಗಿರೀಶ್ ಪಾಟೀಲ, ಮೈನುದ್ಧೀನ ಮೊಮೀನ್ ಇದ್ದರು.