ತಾನು ಮರ್ಕಜ್ ಜಮಾತ್ನಲ್ಲಿ ಭಾಗವಹಿಸಿರುವುದನ್ನು ಯುವಕನು ಟಾಸ್ಕ್ ಫೋರ್ಸ್ನವರಿಗೆ ತಿಳಿಸಿರಲಿಲ್ಲ. ಇವನೊಂದಿಗೆ ಅದೇ ಗ್ರಾಮದ ತಬ್ಲೀಗ್ ಜಮಾತ್ನ ಕಾರ್ಯದರ್ಶಿ, ಮುಖಂಡ ಹಾಗೂ ಆತನ ಮನೆಯವರೂ ಸಹ ಆತನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದರು. ಜಮಾತ್ನಲ್ಲಿ ಭಾಗವಹಿಸಿದ್ದವರ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ, ಇವರು ಮಾಹಿತಿ ನೀಡಿರಲಿಲ್ಲ.