‘ಪ್ರತಿ ಯೋಚನೆ ಹಾಗೂ ಕ್ರಿಯೆಯು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿ ಕ್ಷಣವೂ ನಾವು ಇತಿಹಾಸ ಸೃಷ್ಟಿಸುತ್ತಿರುತ್ತೇವೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜ್ಞಾನವಷ್ಟೇ ಮುಖ್ಯವಲ್ಲ. ಒಳ್ಳೆಯ ಉದ್ಯೋಗ ಹಾಗೂ ವೇತನದ ಪ್ಯಾಕೇಜ್ ಪಡೆಯುವುದು ಯಶಸ್ಸಿನ ಸೂತ್ರವಲ್ಲ. ಉತ್ತಮ ನಾಗರಿಕರಾಗಲು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಹುಶಿಸ್ತೀಯ ಜ್ಞಾನ ಒದಗಿಸುವಲ್ಲಿ ಎನ್ಇಪಿ ಸಹಕಾರಿಯಾಗಿದೆ. ಇದನ್ನು ತಿಳಿಸಿಕೊಡುವಲ್ಲಿ ಬೋಧಕರ ಪಾತ್ರ ಪ್ರಮುಖವಾಗಿದೆ’ ಎಂದು ತಿಳಿಸಿದರು.