ದೂಧ್ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನಿಂದ ಆರು ಮಂದಿ ಯುವಕರು, ಮರಳುವುದಕ್ಕಾಗಿ ರೈಲು ಹಿಡಿಯುವುದಕ್ಕಾಗಿ ನಿಲ್ದಾಣದತ್ತ ಹಳಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಗುಡ್ಡದ ಮೇಲಿದ್ದ ದೊಡ್ಡ ಮರವೊಂದು ಹಳಿ ಮೇಲೆ ಉರುಳಿಬಿದ್ದಿತು. ಇದನ್ನು ಗಮನಿಸಿದ ಯುವಕರು, ಅದೇ ಸಮಯಕ್ಕೆ ಕೊಂಚ ದೂರದಲ್ಲಿ ಬರುತ್ತಿದ್ದ ರೈಲಿಗೆ ಕೆಂಪು ಅಂಗಿ, ಪ್ಲಾಸ್ಟಿಕ್ ಮೊದಲಾದವುಗಳನ್ನು ತೋರಿಸಿದರು. ಇದನ್ನು ಗಮನಿಸಿದ ಚಾಲಕ ಬ್ರೇಕ್ ಹಾಕಿದ್ದರಿಂದ ರೈಲು ಮರಕ್ಕೆ ಸಮೀಪವೇ ಬಂದು ನಿಂತಿಕೊಂಡಿದೆ. ಆ ಯುವಕರ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅಪಘಾತವೊಂದು ತಪ್ಪಿತು. ಆ ರೈಲು ಸರಕು ಸಾಗಣೆಯದ್ದಾಗಿತ್ತು.