‘ರಾಜ್ಯ ಸರ್ಕಾರ ಸಾವಯವ ಕೃಷಿ ನೀತಿಯನ್ನು 2004ರಲ್ಲಿ ಜಾರಿಗೆ ತಂದಿದೆ. ಸಾವಯವ ಕೃಷಿ ಸುಧಾರಣೆಗೆ ಒತ್ತು ನೀಡಲಾಗಿದೆ. ಈ ಪದ್ಧತಿಯಿಂದ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಅನುಕೂಲಗಳಿವೆ. ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆ ಮಾಡಬಹುದಾಗಿದೆ. ಆರ್ಥಿಕ ಭದ್ರತೆ ಒದಗಿಸುವ, ಜೈವಿಕ ವೈವಿಧ್ಯ ಹೆಚ್ಚಿಸುವ ಕ್ರಮವೂ ಇದಾಗಿದೆ. ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪೀಡೆ ನಿರ್ವಹಣೆ ಕೈಗೊಂಡು ಭೂಮಿ, ನೀರು, ಗಾಳಿ ಹಾಗೂ ಸಸ್ಯ ಸಂಕುಲ ಸಂಪತ್ತನ್ನು ರಕ್ಷಿಸಿ ಪರಿಸರ ಸಮತೋಲನ ಕಾಪಾಡುವ ಕಡಿಮೆ ಖರ್ಚಿನ ಸುಸ್ಥಿರ ಕೃಷಿ ಪದ್ಧತಿಯಾಗಿದೆ’ ಎಂದು ಹೇಳಿದರು.