<p><strong>ಸವದತ್ತಿ:</strong> ಇಲ್ಲಿನ ಪುರಸಭೆ ಎದುರಿಗಿನ ಲಿಂಗರಾಜ ಪ್ರತಿಮೆ ಮುಂಭಾಗದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ಸ್ಥಳೀಯರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.</p>.<p>ಸಾಮಾಜಿಕ ಹೋರಾಟಗಾರ ಎಂ.ಯು. ಬೀಳಗಿ ಮಾತನಾಡಿ, ಪುರಸಭೆ ಮತ್ತು ಪಿಡಬ್ಲುಡಿಗಳಿಂದ ಇಲ್ಲಿನ ಎಪಿಎಮ್ಸಿಯಿಂದ ಲಿಂಗರಾಜ ಸರ್ಕಲ್, ಬಸ್ ನಿಲ್ದಾಣ, ಎಲ್ಐಸಿ, ಎಸ್ಎಲ್ಎಒ ಕ್ರಾಸ್, ಬಸವೇಶ್ವರ ವೃತ್ತ, ಶಿವಾಜಿ ವೃತ್ತದಿಂದ ಭಗೀರಥ ವೃತ್ತದವರೆಗೂ ರಸ್ತೆಗಳ ಮಧ್ಯ 6 ತಿಂಗಳ ಹಿಂದೆ ಅಳವಡಿಸಿದ ವಿದ್ಯುತ್ ಕಂಬಗಳನ್ನು ಬದಲಾಯಿಸುತ್ತಿರುವುದು ಏಕೆ, ₹3 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 30 - ಹೆಮ್ಮಡಗಾ - ಸಿಂಧನೂರು ಹೆದ್ದಾರಿ ರಸ್ತೆಯ ಭಾಗವಾದ ಎಪಿಎಂಸಿಯಿಂದ ಆಲಂಕಾರಿಕ ವಿದ್ಯುತ್ ದೀಪಗಳ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಬೀದಿ ವ್ಯಾಪಾರಸ್ಥರು ಮಳಿಗೆ ನಿರ್ಮಿಸಿಕೊಂಡಿದ್ದು ಪಾದಚಾರಿಗಳ ಮಾರ್ಗವನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿದರು.</p>.<p>‘ಈ ಕುರಿತು ಸಮೀಕ್ಷೆ ನಡೆಸುವವರೆಗೂ ವಿದ್ಯುತ್ ಕಂಬಗಳನ್ನು ಅಳವಡಿಸಬಾರದೆಂದು ಎಚ್ಚರಿಸಿದರೂ ಕಾಮಗಾರಿ ತೀವ್ರ ಗತಿಯಲ್ಲಿದೆ. ಇದರಿಂದ ನಗರಕ್ಕೆ ಬರುವ ವಾಹನಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಜನತೆಗೆ ಸಮಸ್ಯೆಯಾಗಿದೆ’ ಎಂದರು.</p>.<p>‘ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಪುರಸಭೆಯಿಂದ ರಸ್ತೆ ವಿಸ್ತರಣೆ ಕುರಿತು ಸರ್ವೆ ನಡೆಸಲು ತಿಳಿಸಿದರು ಕಾಮಗಾರಿ ನಡೆದಿದೆ. ರಸ್ತೆ ಬದಿ ಪಾದಚಾರಿ ಮಾರ್ಗ, ಚರಂಡಿ ವ್ಯವಸ್ಥೆ ಕಲ್ಪಿಸಿ ಸಮರ್ಪಕ ಸಂಚಾರಕ್ಕೆ ಮಾರ್ಗ ಕಲ್ಪಿಸಲಿ. ಈ ಕುರಿತು ರಾಮದುರ್ಗ ಡಿವೈಎಸ್ಪಿ ಅವರಿಗೆ ತಿಳಿಸಲಾಗಿತ್ತು. ಅವರು ಸಮಸ್ಯೆ ಸರಿಪಡಿಸಲು ಪುರಸಭೆಗೆ ಸೂಚಿಸಿದ್ದರು. ಈ ವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.</p>.<p>‘ಪುರಸಭೆಯಿಂದ ನನೆಗುದಿಗೆ ಬಿದ್ದ ಕಾಮಗಾರಿಗಳು, ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಕಳೆದ 4 ವರ್ಷಗಳಿಂದ 20 ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ನಡೆದಿಲ್ಲ. ರಾಜ ಕಾಲುವೆ ಅತಿಕ್ರಮಣ ನಡೆದು ಮಳೆ ನೀರು ಸಾಗಲು ದಾರಿಯಿಲ್ಲದಾಗಿದೆ. ಜಿಲ್ಲಾಧಿಕಾರಿ ಬರುವವರೆಗೂ ಧರಣಿ ಮುಂದುವರೆಯಲಿದೆ’ ಎಂದರು.</p>.<p> ಲಾಲಸಾಬ ಅಪರಾಧನವರ, ಉಮೇಶ ಭೀಮಣ್ಣವರ, ಸುರೇಶ ತಿಗಡಿ, ಶ್ರೀಧರ ಬಸರಗಿ, ಸೋಮು ಹದ್ಲಿ, ರಿಯಾಜ ನಿಪ್ಪಾಣಿ ಹಾಗೂ ಸ್ಥಳೀಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ಇಲ್ಲಿನ ಪುರಸಭೆ ಎದುರಿಗಿನ ಲಿಂಗರಾಜ ಪ್ರತಿಮೆ ಮುಂಭಾಗದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ಸ್ಥಳೀಯರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.</p>.<p>ಸಾಮಾಜಿಕ ಹೋರಾಟಗಾರ ಎಂ.ಯು. ಬೀಳಗಿ ಮಾತನಾಡಿ, ಪುರಸಭೆ ಮತ್ತು ಪಿಡಬ್ಲುಡಿಗಳಿಂದ ಇಲ್ಲಿನ ಎಪಿಎಮ್ಸಿಯಿಂದ ಲಿಂಗರಾಜ ಸರ್ಕಲ್, ಬಸ್ ನಿಲ್ದಾಣ, ಎಲ್ಐಸಿ, ಎಸ್ಎಲ್ಎಒ ಕ್ರಾಸ್, ಬಸವೇಶ್ವರ ವೃತ್ತ, ಶಿವಾಜಿ ವೃತ್ತದಿಂದ ಭಗೀರಥ ವೃತ್ತದವರೆಗೂ ರಸ್ತೆಗಳ ಮಧ್ಯ 6 ತಿಂಗಳ ಹಿಂದೆ ಅಳವಡಿಸಿದ ವಿದ್ಯುತ್ ಕಂಬಗಳನ್ನು ಬದಲಾಯಿಸುತ್ತಿರುವುದು ಏಕೆ, ₹3 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 30 - ಹೆಮ್ಮಡಗಾ - ಸಿಂಧನೂರು ಹೆದ್ದಾರಿ ರಸ್ತೆಯ ಭಾಗವಾದ ಎಪಿಎಂಸಿಯಿಂದ ಆಲಂಕಾರಿಕ ವಿದ್ಯುತ್ ದೀಪಗಳ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಬೀದಿ ವ್ಯಾಪಾರಸ್ಥರು ಮಳಿಗೆ ನಿರ್ಮಿಸಿಕೊಂಡಿದ್ದು ಪಾದಚಾರಿಗಳ ಮಾರ್ಗವನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿದರು.</p>.<p>‘ಈ ಕುರಿತು ಸಮೀಕ್ಷೆ ನಡೆಸುವವರೆಗೂ ವಿದ್ಯುತ್ ಕಂಬಗಳನ್ನು ಅಳವಡಿಸಬಾರದೆಂದು ಎಚ್ಚರಿಸಿದರೂ ಕಾಮಗಾರಿ ತೀವ್ರ ಗತಿಯಲ್ಲಿದೆ. ಇದರಿಂದ ನಗರಕ್ಕೆ ಬರುವ ವಾಹನಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಜನತೆಗೆ ಸಮಸ್ಯೆಯಾಗಿದೆ’ ಎಂದರು.</p>.<p>‘ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಪುರಸಭೆಯಿಂದ ರಸ್ತೆ ವಿಸ್ತರಣೆ ಕುರಿತು ಸರ್ವೆ ನಡೆಸಲು ತಿಳಿಸಿದರು ಕಾಮಗಾರಿ ನಡೆದಿದೆ. ರಸ್ತೆ ಬದಿ ಪಾದಚಾರಿ ಮಾರ್ಗ, ಚರಂಡಿ ವ್ಯವಸ್ಥೆ ಕಲ್ಪಿಸಿ ಸಮರ್ಪಕ ಸಂಚಾರಕ್ಕೆ ಮಾರ್ಗ ಕಲ್ಪಿಸಲಿ. ಈ ಕುರಿತು ರಾಮದುರ್ಗ ಡಿವೈಎಸ್ಪಿ ಅವರಿಗೆ ತಿಳಿಸಲಾಗಿತ್ತು. ಅವರು ಸಮಸ್ಯೆ ಸರಿಪಡಿಸಲು ಪುರಸಭೆಗೆ ಸೂಚಿಸಿದ್ದರು. ಈ ವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.</p>.<p>‘ಪುರಸಭೆಯಿಂದ ನನೆಗುದಿಗೆ ಬಿದ್ದ ಕಾಮಗಾರಿಗಳು, ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಕಳೆದ 4 ವರ್ಷಗಳಿಂದ 20 ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ನಡೆದಿಲ್ಲ. ರಾಜ ಕಾಲುವೆ ಅತಿಕ್ರಮಣ ನಡೆದು ಮಳೆ ನೀರು ಸಾಗಲು ದಾರಿಯಿಲ್ಲದಾಗಿದೆ. ಜಿಲ್ಲಾಧಿಕಾರಿ ಬರುವವರೆಗೂ ಧರಣಿ ಮುಂದುವರೆಯಲಿದೆ’ ಎಂದರು.</p>.<p> ಲಾಲಸಾಬ ಅಪರಾಧನವರ, ಉಮೇಶ ಭೀಮಣ್ಣವರ, ಸುರೇಶ ತಿಗಡಿ, ಶ್ರೀಧರ ಬಸರಗಿ, ಸೋಮು ಹದ್ಲಿ, ರಿಯಾಜ ನಿಪ್ಪಾಣಿ ಹಾಗೂ ಸ್ಥಳೀಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>