ಉದ್ಘಾಟಿಸಿದ ಸಂಗೀತ ವಿದ್ವಾಂಸ ವಿಜಯಕುಮಾರ ತೇಲಿ ಅವರು ಸಂಗೀತ ಕಲೆಯ ಸ್ವರೂಪ, ಉದ್ದೇಶ, ಪ್ರಯೋಜನಗಳೊಂದಿಗೆ ವಿವಿಧ ಸಂಗೀತ ಪ್ರಕಾರಗಳ ಶಾಸ್ತ್ರೀಯ ವಿವರಣೆಯನ್ನು ನೀಡಿದರು. 40 ಶಿಬಿರಾರ್ಥಿಗಳ ಧ್ವನಿ ಪರೀಕ್ಷೆ ಮಾಡಿದರು. ಶಿಬಿರದ ಮುಂದಿನ ಹತ್ತು ದಿನಗಳಲ್ಲಿ ಶರಣರ ವಚನ, ರಂಗ ಗೀತೆ, ಜನಪದ ಗೀತೆಗಳನ್ನು, ತಾಳ ಲಯ ಸ್ವರೂಪ ಸಂಯೋಜನೆ, ವಾದ್ಯಗಳೊಂದಿಗೆ ಕಲಿಸುವುದಾಗಿ ತಿಳಿಸಿದರು.