ನಾಗೇಂದ್ರ ದೊಡ್ಡವನು ಎಂದರೆ ಅವನು ಪಾರ್ವತಿಯ ಕಿರುಬೆರಳಿನ ಉಂಗುರವಾಗಿದ್ದಾನೆ. ಪಾರ್ವತಿಯು ದೊಡ್ಡವಳು ಎನ್ನೋಣವೆಂದರೆ ಪರಮೇಶ್ವರನ ಅರ್ಧಾಂಗಿಯಾಗಿದ್ದಾಳೆ. ಪರಮೇಶ್ವರನು ದೊಡ್ಡವನು ಎಂದು ಕರೆಯೋಣವೆಂದರೆ ಆತನು ಕೂಡಲಸಂಗನ ಶರಣರ ಹೃದಯದೊಳಗೆ ಅಡಗಿದ್ದಾನೆ. ಆದ್ದರಿಂದ ಭಗವಂತನು ಕಾಯಕನಿಷ್ಠ, ಶ್ರದ್ಧೆಯ ಸೇವೆ ಮಾಡುವ ನಿಸ್ವಾರ್ಥ ಶರಣರ ಹೃದಯದೊಳಗೆ ಅಡಗಿದ್ದಾನೆ. ಇದನ್ನು ನಾವು ಅರಿಯಬೇಕು ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.