ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆ ಭಗವಂತನಿಗೆ ಪ್ರಿಯ

Last Updated 10 ಫೆಬ್ರುವರಿ 2021, 9:08 IST
ಅಕ್ಷರ ಗಾತ್ರ

ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.

ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.

ನಾಗೇಂದ್ರನ ಘನವೆಂಬೆನೆ? ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಗಿತ್ತು.

ಅಂತಹ ಪಾರ್ವತಿ ಘನವೆಂಬೆನೆ? ಪರಮೇಶ್ವರನ ಅರ್ಧಾಂಗಿಯಾದಳು.

ಅಂತಹ ಪರಮೇಶ್ವರನ ಘನವೆಂಬೆನೆ? ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.

ಭಗವಂತನ ಇರುವಿಕೆಯ ಕುರಿತಾಗಿ ಅಣ್ಣ ಬಸವಣ್ಣನವರು ಮಾರ್ಮಿಕವಾಗಿ ಹೀಗೆ ಹೇಳಿದ್ದಾರೆ. ಮನುಷ್ಯನು ವಾಸಿಸುತ್ತಿರುವ ಭೂಮಿಯು ಮೂರು ಪಟ್ಟು ನೀರಿನಿಂದ ಆವೃತವಾಗಿದೆ. ಸಮುದ್ರ ವಿಶಾಲವಾಗಿದೆ ಎಂದರೆ ಅದು ಭೂಮಿಯ ಮೇಲಿದೆ. ಎಲ್ಲವನ್ನೂ ಒಳಗೊಂಡಿರುವ ಭೂಮಿಯು ವಿಶಾಲವಾಗಿದೆ ಎಂದರೆ ನಾಗೇಂದ್ರನು ಅದನ್ನು ಹೊತ್ತುಕೊಂಡಿದ್ದಾನೆ.

ನಾಗೇಂದ್ರ ದೊಡ್ಡವನು ಎಂದರೆ ಅವನು ಪಾರ್ವತಿಯ ಕಿರುಬೆರಳಿನ ಉಂಗುರವಾಗಿದ್ದಾನೆ. ಪಾರ್ವತಿಯು ದೊಡ್ಡವಳು ಎನ್ನೋಣವೆಂದರೆ ಪರಮೇಶ್ವರನ ಅರ್ಧಾಂಗಿಯಾಗಿದ್ದಾಳೆ. ಪರಮೇಶ್ವರನು ದೊಡ್ಡವನು ಎಂದು ಕರೆಯೋಣವೆಂದರೆ ಆತನು ಕೂಡಲಸಂಗನ ಶರಣರ ಹೃದಯದೊಳಗೆ ಅಡಗಿದ್ದಾನೆ. ಆದ್ದರಿಂದ ಭಗವಂತನು ಕಾಯಕನಿಷ್ಠ, ಶ್ರದ್ಧೆಯ ಸೇವೆ ಮಾಡುವ ನಿಸ್ವಾರ್ಥ ಶರಣರ ಹೃದಯದೊಳಗೆ ಅಡಗಿದ್ದಾನೆ. ಇದನ್ನು ನಾವು ಅರಿಯಬೇಕು ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT