ಬೆಳಗಾವಿ: ಗೋಕಾಕಬಿಜೆಪಿ ಶಾಸಕರಮೇಶಜಾರಕಿಹೊಳಿವಿರುದ್ಧದಸಿ.ಡಿ.ಪ್ರಕರಣದ ಯುವತಿಯ ಪೋಷಕರನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸೋಮವಾರ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೋವಿನಲ್ಲಿರುವ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದೇನೆ. ನಮ್ಮ ಸಮಾಜದ ಹೆಣ್ಣು ಮಗಳ ಕುಟುಂಬ ಧೈರ್ಯವಾಗಿ ಇರಬೇಕು. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರವಾಗಿದ್ದು, ಸರಿಯಾಗಿ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.
‘ಸಮಾಜದ ನಾಯಕರನ್ನು ತುಳಿಯುವ ಪ್ರಯತ್ನ ಮೊದಲಿನಿಂದಲೂ ನಡೆದಿದೆ. ಮಗಳು ಒತ್ತಡದಲ್ಲಿದ್ದಾಳೆ ಎಂದು ತಂದೆ- ತಾಯಿ ಹೇಳಿದ್ದಾರೆ. ನೊಂದಿರುವ ಈ ಕುಟುಂಬದ ಪರವಾಗಿ ಸಮಾಜ ಹಾಗೂ ಪೀಠ ಇರುತ್ತದೆ’ ಎಂದು ತಿಳಿಸಿದರು.