ಗಾಂಧಿ ಅವರಿಂದ ‘ಕರ್ನಾಟಕದ ಸಿಂಹ’ ಎಂದೇ ಕರೆಸಿಕೊಂಡ ಹುದಲಿಯ ಗಂಗಾಧರರಾವ್ ದೇಶಪಾಂಡೆ ಪ್ರಯತ್ನದ ಫಲವಾಗಿ ಆ ಅಧಿವೇಶನ ನಡೆದಿತ್ತು. ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಮೌಲಾನಾ ಮಹಮ್ಮದ್ಅಲಿ, ಮೌಲಾನಾ ಶೌಕತ್ಅಲಿ, ಸರೋಜಿನಿ ನಾಯ್ಡು, ಲಾಲಾ ಲಜಪತ ರಾಯ್ ಅವರಂಥ ದಿಗ್ಗಜರ ತಂಡವೇ ಪಾಲ್ಗೊಂಡಿತ್ತು. ಕಪ್ಪು–ಬಿಳುಪಿನ ಕಾಲದ ಫೋಟೊಗಳು ಆ ರೋಮಾಂಚಕ ಕ್ಷಣಗಳನ್ನು ಈಗಲೂ ಹಿಡಿದಿಟ್ಟಿವೆ.