<p><strong>ಬೆಳಗಾವಿ: </strong>‘ವೀರಶೈವ– ಲಿಂಗಾಯತರು ಒಳಪಂಗಡಗಳನ್ನು ಮರೆತು, ಸಂಬಂಧ ಬೆಳೆಸಿದರೆ ಶರಣ ಧರ್ಮದ ಆಶಯ ನೆರವೇರುತ್ತದೆ’ ಎಂದು ರಾಜಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.</p>.<p>ಇಲ್ಲಿ ವೀರಶೈವ ಲಿಂಗಾಯತ ವಧು–ವರರ ಅನ್ವೇಷಣ ಕೇಂದ್ರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ 58ನೇ ವೀರಶೈವ ಲಿಂಗಾಯತ ವಧು–ವರರ ಪಾಲಕರ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು ಕೂಡಲಸಂಗಯ್ಯನೆಂಬ ಭಾವನೆಯನ್ನು ಹೊಂದಿದರೆ, ಸಮಾಜದಲ್ಲಿ ಐಕ್ಯತೆ ಬೆಳೆಯಲಿದೆ. ಸಮಾಜವೂ ಸಹ ಸಂಘಟಿತಗೊಳ್ಳುತ್ತದೆ. ಈ ದಿಸೆಯಲ್ಲಿ ಸಮಾವೇಶದಲ್ಲಿ ಪಾಲಕರು ಚಿಂತಿಸಬೇಕು‘ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ವಧು–ವರ ಹಾಗೂ ಪಾಲಕರು ಆಸ್ತಿ, ಅಂತಸ್ತು, ಅಧಿಕಾರ, ಜಾತಿ ಉಪ ಜಾತಿಗಳಿಗೆ ಆದ್ಯತೆ ನೀಡದೇ, ಮನೆತನದ ಸಂಸ್ಕಾರ, ಆರೋಗ್ಯದ ಬಗ್ಗೆ ಮಹತ್ವ ನೀಡಬೇಕು. ವೈವಾಹಿಕ ಸಂಬಂಧಗಳನ್ನು ಬೆಸೆಯಬೇಕು’ ಎಂದು ತಿಳಿಸಿದರು.</p>.<p>ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ರತ್ನಪ್ರಬಾ ಬೆಲ್ಲದ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಸಿದ್ದನಗೌಡ ಪಾಟೀಲ, ಬಿ.ವಿ. ಕಟ್ಟಿ, ಪ್ರಕಾಶ ಬಾಳೇಕುಂದ್ರಿ, ಡಾ.ಗುರುದೇವಿ ಹುಲ್ಲಪ್ಪನವರಮಠ, ವಕೀಲ ಎಂ.ಬಿ. ಝಿರಲಿ, ಡಾ.ವಿಜಯಾ ಪುಟ್ಟಿ, ಡಾ.ಜಯಾ ಜಾಲಿಹಾಳ, ಆಶಾ ಪಾಟೀಲ ಇದ್ದರು.</p>.<p>ವಧು–ವರರ ಅನ್ವೇಷಣ ಕೇಂದ್ರ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ವೀರಶೈವ– ಲಿಂಗಾಯತರು ಒಳಪಂಗಡಗಳನ್ನು ಮರೆತು, ಸಂಬಂಧ ಬೆಳೆಸಿದರೆ ಶರಣ ಧರ್ಮದ ಆಶಯ ನೆರವೇರುತ್ತದೆ’ ಎಂದು ರಾಜಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.</p>.<p>ಇಲ್ಲಿ ವೀರಶೈವ ಲಿಂಗಾಯತ ವಧು–ವರರ ಅನ್ವೇಷಣ ಕೇಂದ್ರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ 58ನೇ ವೀರಶೈವ ಲಿಂಗಾಯತ ವಧು–ವರರ ಪಾಲಕರ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು ಕೂಡಲಸಂಗಯ್ಯನೆಂಬ ಭಾವನೆಯನ್ನು ಹೊಂದಿದರೆ, ಸಮಾಜದಲ್ಲಿ ಐಕ್ಯತೆ ಬೆಳೆಯಲಿದೆ. ಸಮಾಜವೂ ಸಹ ಸಂಘಟಿತಗೊಳ್ಳುತ್ತದೆ. ಈ ದಿಸೆಯಲ್ಲಿ ಸಮಾವೇಶದಲ್ಲಿ ಪಾಲಕರು ಚಿಂತಿಸಬೇಕು‘ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ವಧು–ವರ ಹಾಗೂ ಪಾಲಕರು ಆಸ್ತಿ, ಅಂತಸ್ತು, ಅಧಿಕಾರ, ಜಾತಿ ಉಪ ಜಾತಿಗಳಿಗೆ ಆದ್ಯತೆ ನೀಡದೇ, ಮನೆತನದ ಸಂಸ್ಕಾರ, ಆರೋಗ್ಯದ ಬಗ್ಗೆ ಮಹತ್ವ ನೀಡಬೇಕು. ವೈವಾಹಿಕ ಸಂಬಂಧಗಳನ್ನು ಬೆಸೆಯಬೇಕು’ ಎಂದು ತಿಳಿಸಿದರು.</p>.<p>ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ರತ್ನಪ್ರಬಾ ಬೆಲ್ಲದ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಸಿದ್ದನಗೌಡ ಪಾಟೀಲ, ಬಿ.ವಿ. ಕಟ್ಟಿ, ಪ್ರಕಾಶ ಬಾಳೇಕುಂದ್ರಿ, ಡಾ.ಗುರುದೇವಿ ಹುಲ್ಲಪ್ಪನವರಮಠ, ವಕೀಲ ಎಂ.ಬಿ. ಝಿರಲಿ, ಡಾ.ವಿಜಯಾ ಪುಟ್ಟಿ, ಡಾ.ಜಯಾ ಜಾಲಿಹಾಳ, ಆಶಾ ಪಾಟೀಲ ಇದ್ದರು.</p>.<p>ವಧು–ವರರ ಅನ್ವೇಷಣ ಕೇಂದ್ರ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>