‘ಸ್ಮಾಶಾನದಲ್ಲಿ ಒಂದು ಲೈಟ್ಹಾಕಿಸಲು ಆಗುತ್ತಿಲ್ಲ. ರಸ್ತೆಗೆ ಡಾಂಬರ್ ಹಾಕಿಸುವುದು ದೂರದ ಮಾತು. ಕನಿಷ್ಠ ಮಣ್ಣು ಹಾಕಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ಅವಧಿಯ ಶಾಸಕರು ಮತ್ತು ಈಗಿನ ಶಾಸಕರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಮೊದಲು ಅಭಿವೃದ್ಧಿ ಕಡೆಗೆ ಗಮನ ನೀಡಿ’ ಎಂದು ಕಾಂಗ್ರೆಸ್ ಸದಸ್ಯರಾದ ಇಮಾಮ್ಸಾಬ ಕಲಾದಗಿ, ರಾಜೇಶ್ವರಿ ಮೆಟಗುಡ್ಡ, ದುರಗಪ್ಪ ಬಂಡಿವಡ್ಡರ, ಶಂಕರ ಸೂಳಿಭಾವಿ ಪರೋಕ್ಷವಾಗಿ ಕುಟುಕಿದರು.