<p><strong>ಬೆಳಗಾವಿ:</strong> ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿಸಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಶಿವಕುಮಾರ್ ನಮಗೆ ಹೆದರಿಕೊಳ್ಳಬೇಕು ಎಂದು ಹೇಳಿಲ್ಲ. ಅವರ ಮೇಲೆ ಪ್ರೀತಿ–ವಿಶ್ವಾಸ ಅಥವಾ ಸಂಬಂಧವಾಗಲಿ ನಮಗಿಲ್ಲ’.</p>.<p>– ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು ಹೀಗೆ.</p>.<p>‘ಪ್ರಕರಣವನ್ನು ಹತ್ತು ತಿಂಗಳ ಹಿಂದೆಯೇ ಸಿಬಿಐಗೆ ವಹಿಸಲಾಗಿದೆ. ಅಲ್ಲಿಂದ ಆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ. ಈಗ ದಾಳಿ ನಡೆಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಗೆ ಕುಳಿತಿದ್ದಕ್ಕೆ ಕೊಂಬೆ ಮುರಿಯಿತು ಎನ್ನಲಾಗುವುದಿಲ್ಲ. ಕಾಂಗ್ರೆಸ್ನವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರಷ್ಟೆ’ ಎಂದರು.</p>.<p>‘ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಬಿಜೆಪಿ ಸೇರಲು ಯತ್ನಿಸುತ್ತಿರುವುದು ನನಗೆ ಗೊತ್ತಿಲ್ಲ. ಈ ವಿಚಾರ ನನ್ನೊಂದಿಗಾಗಲಿ, ಕೇಂದ್ರ ಸಚಿವರ ಜೊತೆಗಾಗಲಿ ಚರ್ಚಿಸಿಲ್ಲ. ಸದ್ಯಕ್ಕೆ ಅಲ್ಲಿ (ಧಾರವಾಡದಲ್ಲಿ) ಸೀಟು ಖಾಲಿಯೂ ಇಲ್ಲ. ಅಲ್ಲಿ ಬಂದು ಏನು ಮಾಡುತ್ತಾರೆ? ಎಂದು ಅಚ್ಚರಿಯಿಂದ ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿಸಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಶಿವಕುಮಾರ್ ನಮಗೆ ಹೆದರಿಕೊಳ್ಳಬೇಕು ಎಂದು ಹೇಳಿಲ್ಲ. ಅವರ ಮೇಲೆ ಪ್ರೀತಿ–ವಿಶ್ವಾಸ ಅಥವಾ ಸಂಬಂಧವಾಗಲಿ ನಮಗಿಲ್ಲ’.</p>.<p>– ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು ಹೀಗೆ.</p>.<p>‘ಪ್ರಕರಣವನ್ನು ಹತ್ತು ತಿಂಗಳ ಹಿಂದೆಯೇ ಸಿಬಿಐಗೆ ವಹಿಸಲಾಗಿದೆ. ಅಲ್ಲಿಂದ ಆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ. ಈಗ ದಾಳಿ ನಡೆಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಗೆ ಕುಳಿತಿದ್ದಕ್ಕೆ ಕೊಂಬೆ ಮುರಿಯಿತು ಎನ್ನಲಾಗುವುದಿಲ್ಲ. ಕಾಂಗ್ರೆಸ್ನವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರಷ್ಟೆ’ ಎಂದರು.</p>.<p>‘ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಬಿಜೆಪಿ ಸೇರಲು ಯತ್ನಿಸುತ್ತಿರುವುದು ನನಗೆ ಗೊತ್ತಿಲ್ಲ. ಈ ವಿಚಾರ ನನ್ನೊಂದಿಗಾಗಲಿ, ಕೇಂದ್ರ ಸಚಿವರ ಜೊತೆಗಾಗಲಿ ಚರ್ಚಿಸಿಲ್ಲ. ಸದ್ಯಕ್ಕೆ ಅಲ್ಲಿ (ಧಾರವಾಡದಲ್ಲಿ) ಸೀಟು ಖಾಲಿಯೂ ಇಲ್ಲ. ಅಲ್ಲಿ ಬಂದು ಏನು ಮಾಡುತ್ತಾರೆ? ಎಂದು ಅಚ್ಚರಿಯಿಂದ ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>