ಕೈಮಗ್ಗಗಳು ಜಲಾವೃತ:ಇಲ್ಲಿನ ಖಾಸಬಾಗದ ಸಾಯಿ ನಗರ, ದೇವಾಂಗ ಕಾಲೊನಿ, ಕನಕದಾಸ ನಗರ, ಕಲ್ಯಾಣನಗರದಲ್ಲಿ80ಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆಯಲ್ಲಿ ತೊಡಗಿದ್ದು, 1,800 ಕೈಮಗ್ಗಗಳನ್ನು ಹೊಂದಿದ್ದರು. ಬಳ್ಳಾರಿ ನಾಲೆ ಹಾಗೂ ಚರಂಡಿಗಳು ತುಂಬಿ ಹರಿದ ನೀರು ಮನೆಗಳಿಗೆ ನುಗ್ಗಿದ್ದರಿಂದ ಕೈಮ್ಗಗಳು ಜಲಾವೃತವಾಗಿದ್ದವು. ದಾರ, ಬಿಂಬ್, ತಯಾರಿಸಿದ್ದ ಸೀರೆ ಸೇರಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ನೀರು ಪಾಲಾಗಿವೆ.