‘ಶುಕ್ರವಾರ ಮಧ್ಯಾಹ್ನ ಸವಿತಾ ಮನೆಗೆ ಬಂದಿದ್ದ ಕಿರಣ, ತನಗೆ ಮಗನನ್ನು ತೋರಿಸು ಎಂದು ಕೇಳಿಕೊಂಡಿದ್ದರು. ಇದಕ್ಕೆ ಸವಿತಾ ಒಪ್ಪಲಿಲ್ಲ. ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜ್ಯೋತಿನಾಥ, ಕಬ್ಬಿಣದ ರಾಡ್ನಿಂದ ಕಿರಣ ತಲೆಗೆ ಬಲವಾಗಿ ಹೊಡೆದರು. ಕಿರಣ ನೆಲಕ್ಕೆ ಕುಸಿದು ಬಿದ್ದರು. ಸವಿತಾ ಅದೇ ರಾಡ್ನಿಂದ ತಲೆಗೆ ಮತ್ತೊಮ್ಮೆ ಹೊಡೆದು, ಹತ್ಯೆ ಮಾಡಿದ್ದಾರೆ’ ಎಂದು ಹೇಳಿದರು.