ಪಟ್ಟಣದ ನಿವಾಸಿ ಕಾಳಮ್ಮ ಮಹಾರುದ್ರಪ್ಪ ಕಮ್ಮಾರ (32) ಗಾಯಗೊಂಡವರು. ಎರಡು ದಿನಗಳಿಂದ ಸುರಿದ ಮಳೆಯ ಕಾರಣ ಕಲ್ಲು– ಮಣ್ಣಿನ ಗೋಡೆ ತೋಯ್ದಿತ್ತು. ಅದರ ಪಕ್ಕದಲ್ಲೇ ಕಾಳಮ್ಮ ಅಡುಗೆ ಮಾಡುತ್ತಿದ್ದರು. ಏಕಾಏಕಿ ಅವರ ಮೇಲೆ ಕುಸಿದುಬಿತ್ತು. ಅವಶೇಷಗಳಡಿ ಸಿಲುಕಿದ್ದ ಅವರನ್ನು ರಕ್ಷಿಸಿದ ಜನ, ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇಎಸ್ ಆಸ್ಪತ್ರೆಗೆ ದಾಖಲಿಸಿದರು. ಅವರ ಎರಡೂ ಕಾಲುಗಳು ಮುರಿದಿವೆ, ಸೊಂಟಕ್ಕೆ ಅಪಾರ ಪೆಟ್ಟುಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.