ರಾಜ್ಯ ಸರ್ಕಾರದಿಂದ ‘ಉತ್ತಮ ಶಿಕ್ಷಕ’ ಪ್ರಶಸ್ತಿ, ಕೇಂದ್ರದಿಂದ ‘ಆದರ್ಶ ಶಿಕ್ಷಕ’ ಪ್ರಶಸ್ತಿ ಪಡೆದಿದ್ದರು. ‘ಪ್ರಿಯದರ್ಶಿನಿ’ ಕಾವ್ಯನಾಮದಿಂದ ಕವಿತೆಗಳನ್ನು ರಚಿಸುತ್ತಿದ್ದರು. ‘ಬಯಲು ಬೆಳಗು’– ಮಕ್ಕಳ ನೀತಿವಚನಗಳು, ‘ಆರಾಧಾನ’ ಪ್ರಬಂಧ ಸಂಕಲನ, ಸ್ವಾತಂತ್ರ್ಯಯೋಧ ಬಸಪ್ಪ ಸಿದ್ನಾಳ ಜೀವನಚರಿತ್ರೆ, ನಾಟಕ, ಕಥೆ, ಮಕ್ಕಳ ಕವಿತೆ, ವೈಚಾರಿಕ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬಸವದಳ ಹಾಗೂ ಜಾಮಿಯಾ ಮಸೀದಿ ಖಮರುಲ್ ಇಸ್ಲಾಂ ಸಮಿತಿ ಸದಸ್ಯರಾಗಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ (ತಾಲ್ಲೂಕು) ಹಾಗೂ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು.