ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಹೊಸಮನಿ, ‘ಅಂಬೇಡ್ಕರ್ ಅವರು ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಚಿಂತಕರಾಗಿದ್ದರು’ ಎಂದು ಸ್ಮರಿಸಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತ 2 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಕುಲಸಚಿವ ಪ್ರೊ.ಸಿ.ಎಂ. ತ್ಯಾಗರಾಜ, ಹಣಕಾಸು ಅಧಿಕಾರಿ ಪರಶುರಾಮ ದುಡಗಂಟಿ, ಬಾಬಾಸಾಹೇಬ ಅಂಬೇಡ್ಕರ್ ಅವರ 125ನೇ ವಾರ್ಷಿಕ ಆಚರಣೆಗಳ ಸಮಿತಿ ಅಧ್ಯಕ್ಷ ಪ್ರೊ.ವಿ.ಎಸ್. ಶೀಗೆಹಳ್ಳಿ, ಕಾರ್ಯದರ್ಶಿ ಪ್ರೊ.ಸಿ.ಎನ್. ವಾಘಮೋರೆ, ಸದಸ್ಯ ರಾದ ಪ್ರೊ.ಡಿ.ಎನ್. ಪಾಟೀಲ, ಎಂ.ಎಂ. ಮುತವಳ್ಳಿ ಹಾಗೂ ಅಶೋಕ ಡಿಸೋಜಾ ಉಪಸ್ಥಿತರಿದ್ದರು.