ಬೆಂಗಳೂರಿನ ಬಿಎಚ್ಇಎಲ್ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ರಾಮಚಂದರ್ ಎನ್. ಬಗದಾಳಕರ, ‘ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ಕೌಶಲವನ್ನೂ ರೂಢಿಸಿಕೊಳ್ಳಬೇಕು. ಸತತ ಅಧ್ಯಯನ ಮತ್ತು ಸತ್ಯ ಸಂದತೆಗಳೆರಡು ಉತ್ತಮ ಕೆಲಸ ದೊರಕಿಸಿಕೊಳ್ಳಲು ಸಹಾಯಕ ವಾಗಬಲ್ಲವು. ಉತ್ತಮ ಸಂವಹನ ಮತ್ತು ತಾಂತ್ರಿಕ ಕೌಶಲದಿಂದ ಯಶಸ್ಸು ಸಾಧಿಸಬಹುದು. ಧನಾತ್ಮಕ ವಿಚಾರ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.