ಆದರೆ, ಸುಪ್ರಸಿದ್ಧ ಹಂಪಿಯ ವೀಕ್ಷಣೆಗೆ ಪತ್ನಿ, ಕುಟುಂಬದ ಸದಸ್ಯರ ಜತೆ ಹೊಸಪೇಟೆ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಶುಕ್ರವಾರ ಬಂದಿಳಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸ್ವಾಗತಿಸಲು ಆನಂದ್ ಸಿಂಗ್ ಆಗಮಿಸಿದ್ದರು. ಗುರುವಾರ ಬಳ್ಳಾರಿಯಲ್ಲಿ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲೂ ಆನಂದ್ಸಿಂಗ್ ಪಾಲ್ಗೊಳ್ಳಲಿಲ್ಲ. ಕೇಂದ್ರ ರಸಗೊಬ್ಬರ ಸಚಿವ ಭಗವಂತ್ ಖೂಬಾ ಅವರ ಸಮ್ಮುಖದಲ್ಲಿ ಈ ಯಾತ್ರೆ ನಡೆಯಿತು.