‘ಪ್ರತಿವರ್ಷ ಜೋಳ, ಮುಸುಕಿನ ಜೋಳ, ಮೆಕ್ಕೆಜೋಳ ಗದ್ದೆಗಳಿಗೆ ನುಗ್ಗಿ ಹಿಂಗಾರು ಬೆಳೆಗಳನ್ನು ಕರಡಿಗಳು ಹಾಳು ಮಾಡುತ್ತಿವೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕರಡಿಗಳು ದಾಳಿ ನಡೆಸಿ, ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ಹಾಳು ಮಾಡಿವೆ’ ಎಂದು ಮೂರ್ತಿ ತಿಳಿಸಿದರು.