ಸಭೆ ಮುಗಿದ ನಂತರ ಅಲ್ಲಿಂದ ಹೊರ ಹೋಗುತ್ತಿದ್ದ ಆನಂದ್ ಸಿಂಗ್ ಅವರಿಗೆ ಅರಸ್ ಕೈಮುಗಿದು, ತಮ್ಮನ್ನು ಬೆಂಬಲಿಸಲು ಕೋರಿದರು. ಅದಕ್ಕೆ ಸಿಂಗ್ ಏನನ್ನೂ ಪ್ರತಿಕ್ರಿಯಿಸದೇ ಅಲ್ಲಿಂದ ನಿರ್ಗಮಿಸಿದರು. ಅದಾದ ನಂತರ ಸಂಸದ ವೈ.ದೇವೇಂದ್ರಪ್ಪ, ಶಾಸಕ ರಾಜುಗೌಡ ಅವರ ಕೈಕುಲುಕಿ, ಕರಪತ್ರ ಕೊಟ್ಟರು. ಅದನ್ನು ನೋಡುತ್ತಿದ್ದ ಕಾರ್ಯಕರ್ತರು ಮುಸಿಮುಸಿ ನಗುತ್ತಿದ್ದರು.